Friday, October 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ : 12 ಅಡಿ ಉದ್ದದ ಹೆಬ್ಬಾವು ರಕ್ಷಣೆ

ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಬೀಚನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಅವರ ಗದ್ದೆಯಲ್ಲಿ ಸರಿಸುಮಾರು 12 ಅಡಿ ಉದ್ದದ 35 ರಿಂದ 40 ಕಿಲೋ ತೂಕದ ಇಂಡಿಯನ್ ರಾಕ್ ಪೈಥಾನ್ ಹೆಬ್ಬಾವು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ದೂರವಾಣಿ ಕರೆಯ ಮೇರೆಗೆ ಸರ್ಪಮಿತ್ರ ಹಾಗೂ ವೈದ್ಯರಾದ ಕುದುರುಗುಂಡಿ ಡಾ. ಮಹೇಶ್ ಕುಮಾರ್ ಅವರು ಹೆಬ್ಬಾವನ್ನು ರಕ್ಷಿಸಿ, ಸೂಕ್ತವಾದ ಪರಿಸರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಗಸ್ತು ಪಾಲಕ ಸಿ.ರಾಜೇಶ್, ಹೆಚ್ ಪ್ರತಾಪ್, ಅರಣ್ಯ ಇಲಾಖೆಯ ವಾಹನ ಚಾಲಕರಾದ ಚಂದ್ರು, ಬೀಚನಹಳ್ಳಿ ಗ್ರಾಮದ ಯುವ ಮುಖಂಡರುಗಳಾದ ಶಂಕರ್, ರಮೇಶ್, ಪುಟ್ಟಸ್ವಾಮಿ, ಶಿವು ಹಾಗೂ ಹೆಬ್ಬಾವನ್ನು ಹಿಡಿಯುವ ಸಂದರ್ಭದಲ್ಲಿ ಗದ್ದೆಯಲ್ಲಿ ಗ್ರಾಮದ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!