Friday, October 18, 2024

ಪ್ರಾಯೋಗಿಕ ಆವೃತ್ತಿ

ಕೆ‌.ಆರ್.ಪೇಟೆ| ಕಾಲು ಜಾರಿ ಬಿದ್ದು ಯುವಕ ನೀರು ಪಾಲು

ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಬಲದಂಡೆ ನಾಲೆಗೆ ಯುವಕನೊಬ್ಬ ಕಾಲು ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ನಡೆದಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ನಾಟನಹಳ್ಳಿ ಗ್ರಾಮದ ದಿ.ರಾಘವೇಂದ್ರ ಅವರ ಪುತ್ರ ಪ್ರೀತಮ್‌ಗೌಡ ನೀರು ಪಾಲಾದವ ಯುವಕ.

ದನ ಮೇಯಿಸಲು ಯುವಕ ಜಮೀನಿನ ಬಳಿ ಹೋಗಿದ್ದಾಗ ಬಾಯಾರಿಕೆಯಿಂದ ನೀರು ಕುಡಿಯಲು ಮಂದಗೆರೆ ಬಲದಂಡ ನಾಲೆಗೆ ತೆರಳಿದ್ದ, ಆ ಸಮಯದಲ್ಲಿ ಯುವಕ ಕಾಲು ಜಾರಿ ನೀರು ಪಾಲಾಗಿದ್ದಾನೆ.

ಯುವಕನ ಶವವನ್ನು ಗ್ರಾಮಸ್ಥರು ಮೇಲೆತ್ತಿದ್ದಾರೆ. ಮೃತದೇಹವನ್ನು ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿಡಲಾಗಿದೆ. ಮೃತ ಯುವಕನ ಕುಟುಂಬದವರ ಆಕ್ರಂಧನ ಮುಗಿಲು ಮಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಮನೆ ಮಾಡಿದೆ.

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
ವರದಿ ಶ್ರೀ ರಂಗನಾಥ್ ಮಾಕವಳ್ಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!