ನಮ್ಮ ಸರ್ಕಾರ ಕೇವಲ ಭಾವನಾತ್ಮಕವಾಗಿ ಜನರ ಬಳಿ ಹೋಗಲ್ಲ, ನಾವು ಕೆಲಸ ಮಾಡುವ ಮೂಲಕ ಹೋಗುತ್ತೇವೆ, ಈ ಯೋಜನೆ 2014ರಲ್ಲಿ ಆರಂಭ ಮಾಡಲಾಗಿತ್ತು, ಆದರೆ ಇಂದು ನಮ್ಮ
ಸಿದ್ದರಾಮಯ್ಯನವರೇ ಉದ್ಘಾಟನೆ ಮಾಡುತ್ತಿದ್ದಾರೆ. ಅವರಿಗೆ ಒಂದು ಬದ್ಧತೆ ಇದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಟಿ.ಕೆ.ಹಳ್ಳಿಯಲ್ಲಿ ಕಾವೇರಿ ಐದನೇ ಹಂತದ ಯೋಜನೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಈ ಯೋಜನೆ ಇಡೀ ನಾಡಿಗೆ ಸಮರ್ಪಣೆಯಾಗಿದೆ. ಈ ಯೋಜನೆಯಿಂದಾಗಿ ಬೆಂಗಳೂರನ್ನ ಇಡೀ ಪ್ರಪಂಚವೇ ನೋಡುವಂತಾಗಿದೆ.
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆ ಇದೆ ಎಂಬುದು ಈ ಯೋಜನೆಯಿಂದ ಸಾಬೀತಾಗಿದೆ ಎಂದು ಮಚ್ಚುಗೆ ವ್ಯಕ್ತಪಡಿಸಿದರು.
ತುಂಗಾ ಭದ್ರ ಡ್ಯಾಮ್ ವಿಚಾರವಾಗಿ ನಮ್ಮ ಸರ್ಕಾರದ ವಿರುದ್ದ ಟೀಕೆ ಮಾಡಿದ್ರು, ಆದರೆ ಐದೇ ದಿನದಲ್ಲಿ ದುರಸ್ತಿ ಕಾರ್ಯ ನಾವು ಮಾಡಿದ್ದೇವೆ ಎಂದರು.
ನಮ್ಮ ಜಿಲ್ಲೆಯಿಂದ ಬೆಂಗಳೂರಿಗೆ ನೀರು ಕೊಡುತ್ತಿರುವುದರಿಂದ ಈ ಭಾಗದ ವಿಸಿ ನಾಲೆ ಆಧುನಿಕರಣಕ್ಕೆ ಸಿಎಂ, ಡಿಸಿಎಂ ರವರು ಬಿಡಿಎ ವತಿಯಿಂದ 5 ಸಾವಿರ ಕೋಟಿಯ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.