ನಾಲ್ವಡಿ ಕೃಷ್ಣರಾಜ ಒಡೆಯರಂತಹ ಪ್ರಬುದ್ಧ ಮತ್ತು ಮಿರ್ಜಾ ಇಸ್ಮಾಯಿಲ್ ಅವರಂತಹ ದಕ್ಷರ ಆಡಳಿತದಲ್ಲಿ ಮೈಸೂರು ರಾಮರಾಜ್ಯವಾಗಿದೆ.
ಇವರ ಅವಧಿಯು ‘ಮೈಸೂರು ರಾಜ್ಯದ ಸುವರ್ಣಯುಗ’. ಈ ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದ್ದರೂ ಒಡಹುಟ್ಟಿದವರ ಹಾಗೆ ರಾಜ್ಯದ ಅಭಿವೃದ್ಧಿಗೆ, ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ. ಇವರ ಕಾರ್ಯದಕ್ಷತೆಯನ್ನು ಜನಸೇವೆಯಲ್ಲಿರುವ ನೆಹರೂ, ಜಿನ್ನಾ ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದರು.
ಮೈಸೂರು ದಿವಾನರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಮಿರ್ಜಾ ಇಸ್ಮಾಯಿಲ್ ಅವರು ವಿಶೇಷವಾಗಿ ಮಂಡ್ಯದ ದೊಡ್ಡಾಸ್ಪತ್ರೆ ಮತ್ತು ಡಿಸಿ ಕಚೇರಿ ಉದ್ಯಾನವನ್ನು ಕೊಡುಗೆಯಾಗಿ ಕೊಟ್ಟರು. ಈ ಪುಣ್ಯಾತ್ಮನನ್ನು ಅವರ ಜನ್ಮದಿನವಾದ ಇಂದು ಚಿತ್ರಕೂಟ ಸ್ಮರಿಸಿದೆ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
[email protected]