ಮೈಸೂರು ದಸರಾ ಆಚರಣೆ ಸಂದರ್ಭದಲ್ಲಿ ಆಯುಧಪೂಜೆಯ ದಿನ ರಾತ್ರಿ ತೆರೆದ ಬಸ್ ನಲ್ಲಿ ಮೈಸೂರು ನಗರದ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಣೆ ಮಾಡುತ್ತಿದ್ದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಯೊಬ್ಬರು ಐ ಲವ್ ಯೂ ಹೇಳಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸಿಎಂ ಸಿದ್ದರಾಮಯ್ಯರಿಗೆ I LOVE YOU ಎಂದ ಅಭಿಮಾನಿ#siddaramaiah @siddaramaiah @INCIndia pic.twitter.com/2q0dzscRAw
— ವಾರ್ತಾ ಭಾರತಿ | Vartha Bharati (@varthabharati) October 12, 2024
“>
ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಐ ಲವ್ ಯು ಎಂದು ಹೇಳಿದರು, ಇದಕ್ಕೆ ಸಿಎಂ ಸಿದ್ದರಾಮಯ್ಯ ಮಂದಹಾಸ ಬೀರಿದರು. ಸಿಎಂ ಪಕ್ಕದಲೇ ಇದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಶ್ಚರ್ಯದಿಂದ ಬಿದ್ದು ಬಿದ್ದು ನಕ್ಕರು. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಇತ್ತೀಚೆಗೆ ಮುಡಾ ನಿವೇಶನ ಪ್ರಕರಣದಲ್ಲಿ ಆರೋಪ ಕೇಳಿ ಬಂದಿತ್ತು. ಇದರ ನಡುವೆ ಅವರನ್ನು ಇಷ್ಟಪಡುವ ಜನರು ಇದ್ದೇ ಇದ್ದಾರೆಂಬುದು ಈ ಘಟನೆಯಿಂದ ಸಾಬೀತಾಗಿದೆ.