ಮಂಡ್ಯ ನಗರದಲ್ಲಿರುವ ಪೇಟೆ ಬೀದಿಯಲ್ಲಿ ವಿವಿಧ ವಾರ್ಡ್ ಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರವಿಕುಮಾರ್ ಗೌಡ ಗಣಿಗ ಇಂದು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ರವಿಕುಮಾರ್ ಗೌಡ ಗಣಿಗ, ನಗರಸಭೆ ನಿಧಿ ಮತ್ತು 15ನೇ ಹಣಕಾಸು ಯೋಜನೆಯಡಿ ಅಂದಾಜು ವೆಚ್ಚ 90 ಲಕ್ಷ ರೂ. ಗಳಲ್ಲಿ ಎರಡು ಮೂರು ನಾಲ್ಕು ಐದು ಮತ್ತು 35ನೇ ವಾರ್ಡ್ಗಳಲ್ಲಿನ ರಸ್ತೆ ಹಾಗೂ ಚರಂಡಿಯ ಅಭಿವೃದ್ಧಿ ಕಾಮಗಾರಿಯು ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯರಾದ ಮಂಜುಳಾ, ಪೂರ್ಣಿಮಾ, ನಹಿಮ್, ಮಂಜು ಹಾಗೂ ಮುಡಾ ಸದಸ್ಯರಾದ ಎಂ ಕೃಷ್ಣ, ಮುಖಂಡರಾದ ಮಂಜುನಾಥ್ ರಾಜಣ್ಣ ಸೇರಿದಂತೆ ಹಲವರು ಹಾಜರಿದ್ದರು.