Thursday, September 26, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಆರತಿ ಬೇಕಾಗಿಲ್ಲ, ರೈತರ ಜಮೀನಿಗೆ ನೀರು ಕೊಡಿ: ಅನ್ನದಾನಿ

ಗಗನಚುಕ್ಕಿ ಜಲಪಾತೋತ್ಸವ ಮುಗಿದಿದೆ, ಈಗ ಕಾವೇರಿ ಆರತಿ ಮಾಡುತ್ತಿದ್ದಾರೆ. ರೈತರು ಇವೆಲ್ಲಬೇಕೆಂದು ಕೇಳುತ್ತಿಲ್ಲ, ಅವರ ಕೆರೆ-ಕಟ್ಟೆಗಳಿಗೆ ನೀರು ಕೊಡಿ, ಜೀವನವನ್ನು ಹಸನು ಮಾಡಿ ಎಂದು ಮಾಜಿ ಶಾಸಕನುದಿ ಅನ್ನದಾನಿ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ,ಪ್ರಾಣಿ ,ಪಕ್ಷಿಗಳಿಗೆ ಎಲ್ಲಿ ನೀರು ಸಿಗುತ್ತದೆ ಅದೇ ಜಲಪಾತೋತ್ಸವ ಮಾಡಿದಂತೆ ಆಗುತ್ತದೆ .ಆದರೆ ಎರಡು ಟಿಎಂಸಿ ನೀರು ಪೋಲು ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಹರಿಹಾಯ್ದರು.

ಬೆಳೆ ಪರಿಹಾರ ನೀಡಿ

ನೀರಿಲ್ಲದೆ ಮಳವಳ್ಳಿಯ ರೈತರು ಬೆಳೆ ನಷ್ಟ ಅನುಭವಿಸುತ್ತಿರುವುದರಿಂದ ಪ್ರತಿ ಎಕರೆಗೆ 30,000 ರೂಪಾಯಿ ಪರಿಹಾರ ನೀಡಬೇಕು. ಮಳವಳ್ಳಿಯ ಬಹುತೇಕ ಪ್ರದೇಶಗಳಲ್ಲಿ ನೀರಿಗೆ ತೊಂದರೆ ಆಗಿದೆ. ಕೆಲವೆಡೆ ಮಳೆ ಆಶ್ರಯಿಸಿ ಬಿತ್ತನೆ ಮಾಡಲಾಗಿದೆ. ಆದರೆ ಈ ಭಾಗಕ್ಕೆ ನೀರು ಹರಿಸದ ಕಾರಣ ಬೆಳೆಗಳು ಒಣಗಿವೆ, ಪ್ರತಿ ಎಕರೆಗೆ ನೀರಾವತಿ ಭೂಮಿಗೆ 30,000, ಖುಷ್ಕಿ ಜಮೀನಿಗೆ 25000 ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಳವಳ್ಳಿ ತಾಲೂಕಿನ ಸಮಸ್ಯೆಗಳ ಬಗ್ಗೆ ಮನವಿ ಮಾಡಿದರೂ ಸರ್ಕಾರ ಕಿಂಚಿತ್ತು ಗಮನಹರಿಸಿಲ್ಲ. ರೈತರು ನೀರಿಗೆ ಕಣ್ಣೀರು ಹಾಕಿ, ಈಗ ಕಣ್ಣಿನಿಂದ ರಕ್ತ ಸುರಿಸುವ ಪರಿಸ್ಥಿತಿ ಎದುರಾಗಿದೆ. ಜಲಪಾತೋತ್ಸವ ಸಂದರ್ಭದಲ್ಲಿ ನೀರಿಗಾಗಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪೊಲೀಸರು ನಮ್ಮನ್ನು 5 ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದರು ಎಂದು ದೂರಿದರು.

ಮಳವಳ್ಳಿ ವ್ಯಾಪ್ತಿಯ ಮಳೆ ಆಶ್ರಯ ಪ್ರದೇಶದಲ್ಲಿ ರಾಗಿ ಮತ್ತು ಜೋಳ ಪ್ರಮುಖ ಬೆಳೆಯಾಗಿದೆ. ಮಳೆ ನಂಬಿ ರೈತರು ಬೆಳೆ ಹಾಕಿದ್ದಾರೆ .ಆದರೆ ನೀರಿಲ್ಲದೆ ಬೆಳೆಗಳು ಒಣಗಿದೆ ಎಂದರು. ಹೆಬ್ವಕವಾಡಿ ,ವಿಶ್ವೇಶ್ವರಯ್ಯ, ರಾಮಸ್ವಾಮಿ, ಮಾಧವ ಮಂತ್ರಿ ನಾಲೆ ಸೇರಿದಂತೆ ಐದು ನಾಲೆಗಳು ರೈತರ ಜೀವನಕ್ಕೆ ಆಶ್ರಯ ನೀಡಿದೆ. ಆದರೆ ಒಂದು ನಾಲೆಯನ್ನು ಹೊರತುಪಡಿಸಿ ಬೇರೆ ಎಲ್ಲೂ ನೀರು ಬಿಟ್ಟಿಲ್ಲ ಎಂದು ದೂರಿದರು.

ಉದ್ಯೋಗ ಮೇಳ

ಮುಂಬರುವ ಅಕ್ಟೋಬರ್ 18 ಮತ್ತು 19ರಂದು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಉದ್ಯೋಗ ಮೇಳ ನಡೆಸಲಿದ್ದಾರೆ. ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವ ದೃಷ್ಟಿಯಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ, 3000 ಮಂದಿಗೆ ಉದ್ಯೋಗ ಕಲ್ಪಿಸುವುದು ಕುಮಾರಸ್ವಾಮಿಯವರ ಉದ್ದೇಶವಾಗಿದೆ, ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಜೆಡಿಎಸ್ ಎಸ್ ಸಿ ಘಟಕದ ಜಿಲ್ಲಾಧ್ಯಕ್ಷ ಜಯರಾಮು, ಪುರಸಭೆ ಮಾಜಿ ಅಧ್ಯಕ್ಷ ನಂದಕುಮಾರ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ರವಿ, ಅಲ್ಪಸಂಖ್ಯಾತ ಘಟಕದ ಮೆಹಬೂಬ್ ಪಾಷಾ, ಹನುಮಂತು ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!