Friday, October 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ₹90 ಲಕ್ಷ ವೆಚ್ಚದಲ್ಲಿ ಪೇಟೆಬೀದಿ, ಹೊಳಲು ವೃತ್ತದ ರಸ್ತೆ ಅಭಿವೃದ್ದಿ: ರವಿಕುಮಾರ್

₹90 ಲಕ್ಷ ವೆಚ್ಚದಲ್ಲಿ ಮಂಡ್ಯನಗರದ ಹೃದಯ ಭಾಗವಾದ ಪೇಟೆಬೀದಿ, ಹೊಳಲು ವೃತ್ತದ ರಸ್ತೆ ಅಭಿವೃದ್ದಿ ಹಾಗೂ ಒಳಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ಶನಿವಾರ ಬೆಳಿಗ್ಗೆ ಮಂಡ್ಯ ಹೊಳಲು ವೃತ್ತದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪೇಟೆಬೀದಿ ಮುಖ್ಯರಸ್ತೆ ಹಾಗೂ 2,3,4,5 ಹಾಗೂ 35ನೇ ವಾರ್ಡ್ ಗಳ ಅಭಿವೃದ್ದಿಗೆ ನಗರಸಭೆಯ 15ನೇ ಹಣಕಾಸು ಯೋಜನೆಯಡಿ ಕ್ರಮ ಕೈಗೊಳ್ಳಲಾಗಿದೆ, ನಾಗರೀಕರಿಗೆ ರಸ್ತೆ ಡಾಂಬರೀಕರಣ ಮಾಡಿ ಉತ್ತಮ ಸೌಕರ್ಯ ಒದಗಿಸಲಾಗುವುದು, ಈಗಾಗಲೇ ಕಾಮಗಾರಿಯ ಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಮಂಡ್ಯದ ಹೊಳಲು ಸರ್ಕಲ್ ನಲ್ಲಿ ಶಾಸಕರಾದ ಗಣಿಗ ರವಿಯವರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನಗರ ಸಭೆ ಅಧ್ಯಕ್ಷ ನಗರಸಭಾ ಸದಸ್ಯರೊಡನೆ ಗುದ್ದಲಿ ಪೂಜೆ ನೆರವೇರಿಸಿರು.

ನಗರಸಭಾ ಅಧ್ಯಕ್ಷ ಪ್ರಕಾಶ್ ಎಂ ವಿ (ನಾಗೇಶ್) ಮಾತನಾಡಿ, ಶಾಸಕರ ನೇತೃತ್ವದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು, ನಗರದ ಅಭಿವೃದ್ದಿ ಶಾಸಕರು ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಅರುಣ್ ಕುಮಾರ್, ಮುಡಾ ಅಧ್ಯಕ್ಷ ನಹೀಂ, ಸದಸ್ಯರಾದ ಹೆಚ್.ಎಸ್.ಮಂಜು, ಮಂಜುಳಾ, ಪೂರ್ಣಿಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!