ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಗೃಹಿಣಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.
ಮುದುಗೆರೆ ಗ್ರಾಮದ ನೇತ್ರಾವತಿ ಮೋಹನ್ (47) ಮೃತ ಗೃಹಣಿ.
ಮನೆ ಸಮೀಪವಿರುವ ಸ್ವಂತ ಜಮೀನಿನಲ್ಲಿ ಕೃಷಿ ಚಟುವಟಿಕೆ ತೊಡಗಿದ್ದ ಸಂದರ್ಭದಲ್ಲಿ ಗಿಡ ಗೆಡ್ಡೆಗಳಿಂದ ಕೂಡಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಅನಾಹುತ ಸಂಭವಿಸಿದೆ.
ಸೆಸ್ಕ್ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಹಲವು ಬಾರಿ ಗ್ರಾಮದಲ್ಲಿರುವ ವಿದ್ಯುತ್ ಕಂಬಗಳ ಮೇಲೆ ಬೆಳೆದು ನಿಂತಿರುವ ಗಿಡ ಗೆಡ್ಡೆಗಳ ತೆರವುಗೆ ಮನವಿ ಮಾಡಿದರು. ಸೆಸ್ಕ್ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸದಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಘಟನ ಸ್ಥಳಕ್ಕೆ ಬಂದ ಸಸ್ಕ್ ಅಧಿಕಾರಿಗಳನ್ನು ಗ್ರಾಮಸ್ಥರಿಂದ ತರಟೆಗೆ ತೆಗೆದುಕೊಂಡರು. ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.