ಲಕ್ಷ ಕಲ್ಪವೃಕ್ಷ ಮಹಾಮೇಳ ಯೋಜನೆಯಡಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಬೆಂಗಳೂರಿನ ರೋಟರಿ ಸಂಸ್ಥೆ ಹಾಗೂ ಸಂಪೂರ್ಣ ಸಾವಯವ ಕೃಷಿಕರ ಸಂಘದ ಇವರ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ತೆಂಗಿನ ಸಸಿಯನ್ನು ವಿತರಿಸಲಾಯಿತು.
ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ ಎನ್ ಮಹೇಶ್ ಕುಮಾರ ಮಾತನಾಡಿ
ಶಾಲಾ ಹಂತದಲ್ಲಿಯೇ ಸಾವಯವ ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕಿನ ರಾವಣಿ, ಆಲದಹಳ್ಳಿ, ಮಾರಗೌಡನಹಳ್ಳಿ ಮತ್ತು ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸುಮಾರು ೧೦೦೦ ಮಕ್ಕಳಿಗೆ ಉಚಿತವಾಗಿ 2000 ತೆಂಗಿನ ಸಸಿಗಳನ್ನು ವಿತರಣೆ ಮಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನ ಕೈಗೊಂಡಿದ್ದು ಶಾಲೆಗಳಿಗೆ ಪೂರಕವಾದ ಸೌಲಭ್ಯಗಳನ್ನ ಒದಗಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೋಟರಿಯ ಗೌವರ್ನರ್ಗಳಾದ ಎನ್.ಎಸ್.ಮಹದೇವಪ್ರಸಾದ್,ರೋಟರಿ ಸಂಸ್ಥೆಯ ಶ್ಯಾಮ್ ಮೂರ್ತಿ, ಸುಪ್ರಿಯಾ, ಅನುರಾಧ, ಅಕ್ಷಯ ಮಲ್ಲಪ್ಪ, ನಟರಾಜ್, ಹರೀಶ್, ಮಳವಳ್ಳಿ ರೋಟರಿ ಸಂಸ್ಥೆಯ ಅಧ್ಯಕ್ಷ ಸುರೇಶ್, ಗೌತಮ್ ಚಂದ್, ಗನ್ ಶ್ಯಾಮ್ ಚಂದ್, ಶಾಲಾ ಅಭಿವೃದ್ಧಿ ಅಧ್ಯಕ್ಷ ಅಧ್ಯಕ್ಷ ಮಹೇಶ್, ಚಿಕ್ಕಣ್ಣ, ಶಿವಕುಮಾರ್, ಗಜೇಂದ್ರ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಸೇರಿದಂತೆ ಇತರರು ಇದ್ದರು.