ವರದಿ : ನ.ಲಿ.ಕೃಷ್ಣ ಸಾಮಾಜಿಕ ಕಾರ್ಯಕರ್ತರು
ಮದ್ದೂರು ತಾಲೂಕಿನ ಅರುವನಹಳ್ಳಿ ಗೇಟ್ ಬಳಿ ಜಯರಾಮ್ ಎಂಬುವವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಆದ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು 15 ಲಕ್ಷ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಜಯರಾಮ್ ಅವರ ದಿನಸಿ ಅಂಗಡಿಯು ಸೇರಿದಂತೆ ಪ್ರಾವಿಷನ್ ಸ್ಟೋರ್ ಸಂಪೂರ್ಣ ಭಸ್ಮವಾಗಿರುವ ಘಟನೆಯು ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.