FIDE ವಿಶ್ವ ಚೆಸ್ ಚಾಂಪಿಯನ್ ಶಿಫ್ ನಲ್ಲಿ ರೋಚಕ ಸೆಣೆಸಾಟ ನಡೆಸಿ, ರನ್ನರ್ ಅಪ್ ಆದ ತಮಿಳುನಾಡು ಮೂಲದ ಅಂತರಾಷ್ಟ್ರೀಯ ಚೆಸ್ ಕ್ರೀಡಾಪಟು ಆರ್.ಪ್ರಜ್ಞಾನಂದ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ₹30 ಲಕ್ಷ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದ್ದಾರೆ.
Delighted to meet the brilliant young mind, @rpragchess, on his triumphant return to #Chennai! 🏆 #Praggnanandhaa‘s achievements bring glory to Tamil Nadu and the entire country. 🇮🇳🏅I had the honour of felicitating Praggnanandhaa with a memento and a reward of 30 lakh INR. This… pic.twitter.com/9xoUeXosh5
— M.K.Stalin (@mkstalin) August 30, 2023
“>
ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ನಂದ ಅವರು FIDE ರೇಟಿಂಗ್ ಅನ್ನು ಹೊಂದಿದ್ದು, ಪ್ರಸ್ತುತ ಜಾಗತಿಕವಾಗಿ 29 ರ್ಯಾಂಗಿಂಗ್ ನಲ್ಲಿದ್ದಾರೆ.
ಪ್ರಜ್ಞಾನಂದ ಅವರು ಅಂತರರಾಷ್ಟ್ರೀಯ ಮಾಸ್ಟರ್ ಎಂಬ ಬಿರುದನ್ನು ಪಡೆದಿದ್ದು, ಇಂತಹ ಅದ್ಭುತ ಯುವ ಮನಸ್ಸನ್ನು ಭೇಟಿಯಾಗಲು ಸಂತೋಷವಾಯಿತು ಎಂದು ಸಿಎಂ ಸ್ಟಾಲಿನ್, ಸಾಮಾಜಿಕ ಮಾಧ್ಯಮ X ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಪ್ರಜ್ಞಾನಂದ ಅವರ ಸಾಧನೆಗಳು ತಮಿಳುನಾಡಿಗೆ ಮತ್ತು ಇಡೀ ದೇಶಕ್ಕೆ ಕೀರ್ತಿ ತರುತ್ತವೆ. ನಾವು ಪ್ರಜ್ಞಾನಂದ ಅವರನ್ನು ಸ್ಮರಣಿಕೆ ಮತ್ತು ₹30 ಲಕ್ಷ ಬಹುಮಾನದೊಂದಿಗೆ ಅಭಿನಂದಿಸಲು ಹರ್ಷಿಸುತ್ತೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಟಾಲಿನ್ ಅವರ ಪುತ್ರ, ನಟ ಉದಯ್ ನಿಧಿ ಉಪಸ್ಥಿತರಿದ್ದರು.