ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ ಹಾಗೂ ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶ ನ.13ರಂದು ನಾಗಮಂಗಲ ತಾಲ್ಲೂಕಿನ ಆದಿಚುಂಚನಗರಿ ಮಠದ ಬಿಜಿಎಸ್ ಸಭಾ ಮಂಟಪದಲ್ಲಿ ಬೆಳಿಗ್ಗೆ 9.30 ಗಂಟೆಗೆ ನಡೆಯಲಿದೆ.
ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸುವರು.
ಒಕ್ಕಲಿಗ ಸಮಾಜ ಬಾಂಧವರಿಗೆ ಮಾತ್ರ ಅವಕಾಶವಿದ್ದು, ವಧುವಿಗೆ 18, ವರನಿಗೆ 21 ವರ್ಷ ಮೇಲ್ಪಟ್ಟಿರಬೇಕು.
ವಧು-ವರರೊಂದಿಗೆ ಪೋಷಕರು ಭಾಗವಹಿಸಬಹುದು. ಆಧಾರ್ ಕಾರ್ಡ್ ಅಥವಾ ಬೇರೆ ಗುರುತಿನ ಚೀಟಿ ನೀಡುವುದು. ಸಮಾವೇಶದಲ್ಲಿ ಭಾಗವಹಿಸುವ ವಿಧವೆಯರು, ವಿಧುರರು ವಿಚ್ಚೇದಿತ ಪ್ರಮಾಣ ಪತ್ರದ ಪ್ರತಿ ಅಥವಾ ಪತ್ನಿಯ ಮರಣ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡಬೇಕು. ಪೋಸ್ಟ್ಕಾರ್ಡ್ ಅಳತೆಯ ಫೋಟೋ ಮತ್ತು 10 ರೂ. ಪಾವತಿಸಿ ಹೆಸರು ನೋಂದಾಯಿಸುವುದು.
ಆಸಕ್ತಿಯುಳ್ಳ ಅರ್ಹ ವಧು-ವರರು ಈ ಸಮಾವೇಶದಲ್ಲಿ ಭಾಗವಹಿಸಲು ಕೋರಿದೆ. ಭಾಗವಹಿಸುವವರು ವಾಟ್ಸಾಪ್ 9606343939, 9448193863, 6363692864 [email protected] ಇ-ಮೇಲ್ ಮುಖಾಂತರ ಮುಂಚಿತವಾಗಿ ನೋಂದಾಯಿಸಿಕೊಳ್ಳಬಹುದು.
ಸಾರಿಗೆ ವ್ಯವಸ್ಥೆಗೆ ಮೊ.9902573595, ವಸತಿ ವ್ಯವಸ್ಥೆಗೆ ಮೊ.9901070500 ಸಂಪರ್ಕಿಸಬಹುದು. ನ.13ರ ಬೆಳಿಗ್ಗೆ 7 ರಿಂದ 09.30 ಗಂಟೆಯವರೆಗೆ ಬೆಳ್ಳೂರು ಕ್ರಾಸ್ ಬಸ್ ನಿಲ್ದಾಣ ಹಾಗೂ ಬಿ.ಜಿ. ನಗರ ರೈಲ್ವೆ ನಿಲ್ದಾಣದಿಂದ ಶ್ರೀ ಕ್ಷೇತ್ರಕ್ಕೆ ಉಚಿತ ಸಾರಿಗೆ ವ್ಯವಸ್ಥೆ ಇರುತ್ತದೆ.