Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ಆಶಯದಂತೆ ಸಮಾಜಮುಖಿ ಸೇವೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಸಮಾಜಮುಖಿ ಸೇವೆಗಾಗಿ ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘ ಸ್ಥಾಪನೆಯಾಗಿದೆ ಎಂದು ಅಧೀಕ್ಷಕ ಅಭಿಯಂತರ ಚಂದ್ರಹಾಸ್ ಹೇಳಿದರು.

ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘ ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ನಾಲ್ಕು ವರ್ಷಗಳಲ್ಲಿ ನೌಕರರು ಸೇರಿ ಅಭಿವೃದ್ಧಿ ಸಹಕಾರ ಸಂಘವನ್ನು ಸ್ಥಾಪಿಸಲು ಚಿಂತನೆ ನಡೆಸಿ, ಅಂಬೇಡ್ಕರ್ ಅವರ ಆಶಯಗಳಾದ ಶಿಕ್ಷಣ, ಆರ್ಥೀಕ ಸಬಲೀಕರಣ, ಸಮುದಾಯ ಅಭಿವೃದ್ಧಿಗೆ ಆದ್ಯತೆ ನೀಡಲು ಮುಂದಾಗಿದ್ದೇವೆ ಎಂದರು.

ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘದಲ್ಲಿ 721 ನೌಕರ ಸದಸ್ಯರು ಷೇರುದಾರಾಗಿದ್ದಾರೆ, ಆರ್ಥಿಕ  ಸಬಲೀಕರಣಕ್ಕೆ ಸಾಲ-ಸೌಲಭ್ಯ, ಅಭಿವೃದ್ಧಿಗಾಗಿ ಸಹಕಾರ ದಿನಸಿ ಮಳಿಗೆ ತೆರೆದು, ರಿಯಾಯಿತಿ ದರದಲ್ಲಿ ಗೃಹೋಪಾಯೋಗಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ, ಸಾರ್ವಜನಿಕರು-ನೌಕರರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಅರುಣಾಕ್ಷಿ, ಸಿಇಓ ಲಿಂಗರಾಜಮ್ಮ, ನಿರ್ದೇಶಕರಾದ ನಂಜುಂಡಸ್ವಾಮಿ, ಶಿವಶಂಕರ್, ಶಿವಕುಮಾರ್, ವೆಂಟಕರಾಮು, ಪ್ರಕಾಶ್, ಕೆ.ಮೋಹನ್‌ಕುಮಾರ್, ರಮೇಶ್, ನಿರಂಜನ್, ವರದರಾಜು, ದೀರೇಂದ್ರಕುಮಾರ್, ಶಿವಣ್ಣ, ಜವರಯ್ಯ, ನಾಗರತ್ನ, ಅಂದಾನಯ್ಯ ಹಾಗೂ ಮೋಹನ್‌ ಕುಮಾರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!