Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿಭಾ ಪುರಸ್ಕಾರ-ಅಭಿನಂದನಾ ಸಮಾರಂಭ

ಭಾರತ ಸೇವಾದಳ ಮಂಡ್ಯ, ಸೇಂಟ್ ಜಾನ್ ಅಂಬುಲೆನ್ಸ್  ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇವರ ವತಿಯಿಂದ ಸೆ.30 ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯ ನಗರದ ಡಾ.ನಾ.ಸು.ಹರ್ಡಿಕರ್ ಭವನದಲ್ಲಿ ಪ್ರತಿಭಾ ಪುರಸ್ಕಾರ, ಧನ ಸಹಾಯ ಹಾಗೂ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಭಾರತ ಸೇವಾದಳ ಮತ್ತು ಸೇಂಟ್ ಜಾನ್ ಅಂಬುಲೆನ್ಸ್ ಕಾರ್ಯದರ್ಶಿ ಜಿ.ವಿ.ನಾಗರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತ ಎಲ್.ಹುಲ್ಮನಿ ಸಮಾರಂಭ ಉದ್ಘಾಟಿಸುವರು. ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಸಿ.ಶಿವಾನಂದ ಅಧ್ಯಕ್ಷತೆ ವಹಿಸುವರು ಎಂದರು.

ಸೇಂಟ್ ಜಾನ್ ಅಂಬುಲೆನ್ಸ್ ಕಾರ್ಯದರ್ಶಿ ಜಿ.ವಿ.ನಾಗರಾಜು ಸ್ವಾಗತ ಭಾಷಣ ಮಾಡುವರು. ಭಾರತ ಸೇವಾದಳದ ಕೇಂದ್ರ ಸಮಿತಿ ಅಧ್ಯಕ್ಷ ವೈ.ಬಿ.ಬಸವರಾಜು ಧನ ಸಹಾಯ ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಭಾರತ ಸೇವಾದಳದ ರಾಜ್ಯಾಧ್ಯಕ್ಷ ಶಂಕರ್ ವಿ.ಮುಗದ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಕಮಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಸ್.ನಾಯ್ದು, ಸೇಂಟ್ ಜಾನ್ ಅಂಬುಲೆನ್ಸ್ ಉಪಾಧ್ಯಕ್ಷ ಆರ್.ಜೇಮ್ಸ್ ಮತ್ತು ಚುಟುಕು ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಿ.ಆರ್.ಅರಸ್ ಭಾಗವಹಿಸುವರು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಭಾರತ ಸೇವಾದಳದ ಕೋಶಾಧ್ಯಕ್ಷ ವಿಜಯಕುಮಾರ್ ಎಸ್.ಪಾಟೀಲ್, ಪದಾಧಿಕಾರಿಗಳಾದ ಶಶಿಧರ್ ಎಂ.ಎಸ್., ಪೂರ್ಣಿಮಾ ಹೆಚ್.ಎಸ್., ವೆಂಕಟನಾರಾಯಣ ಬಿ.ಕೆ., ಎಂ.ನರಸಿಂಹ ಚಂದ್ರಶೇಖರ್ ಹಾಗೂ ಆರ್.ಎ.ಪಿ.ಸಿ.ಎಂ.ಎಸ್ ನಿರ್ದೇಶಕಿ ಹೇಮಲತಾ  ಬಸವರಾಜು ಪಾಲ್ಗೊಳ್ಳುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಶಿವಪ್ರಕಾಶ್ ಬಾಬು, ಸಿ.ಎಸ್.ಗಣೇಶ್ ಹಾಗೂ ಸಜ್ಜನ್ ರಾವ್ ಕೊಠಾರಿ ಉಪಸ್ಥಿತರಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!