ಪಾಂಡವಪುರ ತಾಲ್ಲೂಕಿನ ಹೊಸಯಡವನಹಳ್ಳಿ ಗ್ರಾಮದ ಬಳಿ ತಡೆಗೋಡೆ ಇಲ್ಲದೆ ಇರುವ ಕಿರಿದಾದ ಕಾಲುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಮಾರ್ಗದಲ್ಲಿ ಕೆ.ಆರ್.ಪೇಟೆಗೆ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಹಾಗೇಯೇ ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಕೂಡ ಸಂಚರಿಸುತ್ತವೆ. ಕಾಲುವೆಯ ಮಧ್ಯೆ ರಸ್ತೆ ಇದ್ದು ಎರಡೂ ಬದಿಯಲ್ಲಿ ನೀರು ಹರಿಯುತ್ತದೆ. ಸ್ವಲ್ಪ ದೊಡ್ಡದ್ದೇ ಆದ ಕಾಲುವೆಗೆ ತಡೆಗೋಡೆಗಳಿಲ್ಲ. ರಸ್ತೆಯೂ ಕೂಡ ಕಿರಿದಾಗಿದ್ದು, ತಡೆಗೋಡೆ ಕೂಡಾ ಇಲ್ಲದ ರಸ್ತೆಯಲ್ಲಿ ಚಲಿಸಿದರೆ ಕಾಲುವೆಗೆ ಬೀಳುವ ಎಲ್ಲಾ ಸಾಧ್ಯತೆಗಳಿವೆ.
ಆದ್ದರಿಂದ ಕೂಡಲೇ ಈ ಕಾಲುವೆಯ ಸುತ್ತ ತಡೆಗೋಡೆ ಹಾಕಿ ಸಂಭವಿಸಬಹುದಾದ ಅನಾಹುತಕ್ಕೆ ತಡೆ ಹಾಕಬೇಕೆಂದು ಸರ್ಕಾರಕ್ಕೆ ಜನರು ಮನವಿ ಸಲ್ಲಿಸಿದ್ದಾರೆ.