ಶ್ರೀ ಧರ್ಮಸ್ಥಳ ಮಂಜುನಾಥನ ದರ್ಶನದಿಂದ ಜನರ ಮನಸ್ಸಿಗೆ ನೆಮ್ಮದಿ ಸಿಗುತ್ತಿದ್ದು,ಜನರ ಹಾರೈಕೆಯಿಂದ ನನಗೂ ನೆಮ್ಮದಿ ದೊರಕುತ್ತಿದೆ ಎಂದು ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ತಿಳಿಸಿದರು.
ಶುಕ್ರವಾರ ಶ್ರೀ ಶಂಭು ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಶಂಭು ಧರ್ಮಸ್ಥಳ ಯಾತ್ರೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೊಡ್ಡಗರುಡನಹಳ್ಳಿ, ಎಸ್.ಐ ಕೋಡಿಹಳ್ಳಿ, ಕೋಡಿಹಳ್ಳಿ ವೇಬ್ರಿಡ್ಜ್, ಗುಡಿಗೇನಹಳ್ಳಿ, ದೊಡ್ಡಬಾಣಸವಾಡಿ , ಹುಲ್ಲಹಳ್ಳಿ, ಶ್ಯಾನುಭೋಗನಹಳ್ಳಿ, ಚಿಕ್ಕಮಂಡ್ಯ, ಭವಾನಿಕೊಪ್ಪಲು ಗ್ರಾಮಗಳಿಂದ 11 ಬಸ್ಸುಗಳಲ್ಲಿ 640 ಯಾತ್ರಾರ್ಥಿಗಳನ್ನು ಬೀಳ್ಕೊಟ್ಟು ಅವರು ಮಾತನಾಡಿದರು.
ಇದನ್ನೂ ಓದಿ: ಕೆ.ಆರ್.ಎಸ್ ಬಳಿ ಕಾಣಿಸಿಕೊಂಡ ಚಿರತೆ : ಪ್ರವಾಸಿಗರಲ್ಲಿ ಆತಂಕ
ಧರ್ಮಸ್ಥಳ ಯಾತ್ರೆ ಮಾಡಿಸಬೇಕೆನ್ನುವುದು ನನ್ನ ಬಹಳ ದಿನಗಳ ಉದ್ದೇಶವಾಗಿತ್ತು. ಅದರಂತೆ ಇಂದು ಹತ್ತು ಸಾವಿರಕ್ಕೂ ಹೆಚ್ಚು ಜನರು ಧರ್ಮಸ್ಥಳ ಯಾತ್ರೆ ಮಾಡಿ ಬಂದಿರುವುದು ನನಗೆ ಸಂತಸ ತಂದಿದೆ ಎಂದರು.
ಧರ್ಮಸ್ಥಳ ಯಾತ್ರೆಗೆ ಜನರು ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ.ಇದರಿಂದ ನನಗೆ ಮತ್ತಷ್ಟು ಉತ್ಸಾಹ ಮೂಡಿದೆ ಎಂದರು.
ಶ್ರೀ ಶಂಭು ಸೇವಾ ಟ್ರಸ್ಟ್ ವತಿಯಿಂದ ಸಾತನೂರು, ಹೊನಗಾನಹಳ್ಳಿ, ಕೊಮ್ಮೇರಹಳ್ಳಿ ಮತ್ತು ಮಾರಗೌಡನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೊಮ್ಮೇರಹಳ್ಳಿ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಸಾತನೂರು ಗ್ರಾಮ ಪಂಚಾಯತಿ ಅಧ್ಯಕ್ಷ ರವಿ, ಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿವ್ಯ ಶಿವಕುಮಾರ್, ನಂದೀಶ್, ಕಾರ್ತಿಕ್, ಸುದರ್ಶನ್, ಪ್ರಕಾಶ್, ಪಾಪಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.