ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಅಂಗವಾಗಿ ಜೆಡಿಎಸ್ ಪಕ್ಷವು `ಬಾರಿಸು ಕನ್ನಡ ಡಿಂಡಿಮವ, ಹಾರಿಸು ಕನ್ನಡ ಬಾವುಟ’ ಅಭಿಯಾನವನ್ನು ಆಯೋಜಿಸಿದೆ.
ರಾಜ್ಯೋತ್ಸವ ದಿನದಂದು ಕನ್ನಡಿಗರ ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಮೂಲಕ ಈ ಅಭಿಯಾನಕ್ಕೆ ಬೆಂಬಲ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ೧ರಂದು ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಮೂಲಕ “ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವ” ಅಭಿಯಾನಕ್ಕೆ ಸಹಕರಿಸಬೇಕಾಗಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ವಿನಂತಿ.#ಕನ್ನಡ pic.twitter.com/X8bc4qp81a
— Janata Dal Secular (@JanataDal_S) October 25, 2022
“>
ತಮಿಳು, ತೆಲುಗು, ಮಲಯಾಳಿ ಜನರಿಗೆ ತಮ್ಮ ಭಾಷೆಯ ಮೇಲಿರುವ ಅಭಿಮಾನದಂತೆ ಕನ್ನಡಿಗರು ಕನ್ನಡದ ಮೇಲಿನ ಅಭಿಮಾನವನ್ನು ಎತ್ತಿ ತೋರಿಸುವ ಕಾಲ ಬಂದಿದ್ದು, ನವೆಂಬರ್ 1 ರಂದು ನಾಡಿನ ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವ ಮೂಲಕ ಸೂಪಿ ಸಂತರ ನಾಡಿನ ಅಭಿಮಾನವನ್ನು ವ್ಯಕ್ತಪಡಿಸಬೇಕೆಂದು ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.