Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ನಿಂದ `ಬಾರಿಸು ಕನ್ನಡ ಡಿಂಡಿಮವ’ ಅಭಿಯಾನ

ನವೆಂಬರ್ 1ರ  ಕನ್ನಡ ರಾಜ್ಯೋತ್ಸವ ಅಂಗವಾಗಿ ಜೆಡಿಎಸ್ ಪಕ್ಷವು `ಬಾರಿಸು ಕನ್ನಡ ಡಿಂಡಿಮವ, ಹಾರಿಸು ಕನ್ನಡ ಬಾವುಟ’ ಅಭಿಯಾನವನ್ನು ಆಯೋಜಿಸಿದೆ.

ರಾಜ್ಯೋತ್ಸವ ದಿನದಂದು ಕನ್ನಡಿಗರ ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಮೂಲಕ ಈ ಅಭಿಯಾನಕ್ಕೆ ಬೆಂಬಲ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.

“>

ತಮಿಳು, ತೆಲುಗು, ಮಲಯಾಳಿ ಜನರಿಗೆ ತಮ್ಮ ಭಾಷೆಯ ಮೇಲಿರುವ ಅಭಿಮಾನದಂತೆ ಕನ್ನಡಿಗರು ಕನ್ನಡದ ಮೇಲಿನ ಅಭಿಮಾನವನ್ನು ಎತ್ತಿ ತೋರಿಸುವ ಕಾಲ ಬಂದಿದ್ದು, ನವೆಂಬರ್ 1 ರಂದು ನಾಡಿನ ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವ ಮೂಲಕ ಸೂಪಿ ಸಂತರ ನಾಡಿನ ಅಭಿಮಾನವನ್ನು ವ್ಯಕ್ತಪಡಿಸಬೇಕೆಂದು ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!