ಮಂಡ್ಯ ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಿಂದ ಎಚ್ಚೇತ್ತ ನಗರಸಭೆ ಕೊನೆಗೂ ಮಂಡ್ಯ ನಗರದಾದ್ಯಂತ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಇಷ್ಟು ದಿನ ಸರಿಯಾಗಿ ಕಾರ್ಯ ನಿರ್ವಹಿಸದ ನಗರಸಭೆ ರೈತಸಂಘದ ಹೋರಾಟಕ್ಕೆ ಎಚ್ಚೇತ್ತು ಗುಂಡಿ ಮುಚ್ಚುವ ಕಾಯಕಕ್ಕೆ ಇಳಿದಿದೆ.
`ಇದು ಹೋರಾಟಗಳಿಗೆ ಇರುವ ಗಮ್ಮತ್ತು’ ಎಂದು ರೈತನಾಯಕ ಮಧುಚಂದನ್ ಅವರು `ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬರಹವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ನಮ್ಮ ಚಳವಳಿಗೆ ಮನ್ನಣೆ ನೀಡಿ ಶೀಘ್ರವಾಗಿ ಕಾರ್ಯೋನ್ಮುಖರಾದ ನಗರಸಭೆ, ಪಿಡಬ್ಲ್ಯೂಡಿ ಇಲಾಖೆಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.