ಕೆಲವರು ಕುಟುಂಬ ರಾಜಕಾರಣಕ್ಕಾಗಿ ಅಧಿಕಾರ ದುರುಪಯೋಗವನ್ನು ಮಾಡಿಕೊಳ್ಳುತ್ತಾರೆ. ಆದರೆ ನರೇಂದ್ರ ಮೋದಿಯವರು ದೇಶದ ಜನತೆಗಾಗಿ ಅಧಿಕಾರ ಮಾಡುತ್ತಾರೆ ಎಂದು ಭಾರಿ ಕೈಗಾರಿಕೆ ಮತ್ತು ಇಂಧನ ಸಚಿವ ಕಿಶನ್ ಪಾಲ್ ಗುರ್ಜರ್ ಹೇಳಿದರು.
ಮದ್ದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು, ನಾನು ಅನೇಕ ಕಡೆ ಚುನಾವಣಾ ಪ್ರತಿನಿಧಿಗಳ ಸಭೆಯನ್ನು ನಡೆಸುತ್ತಿದ್ದು, ಪಕ್ಷವನ್ನು ಗಟ್ಟಿಗೊಳಿಸುವ ಪ್ರವಾಸದಲ್ಲಿ ಇದ್ದೇನೆ ಎಂದರು.
ಇಡೀ ಜಗತ್ತಿನಲ್ಲಿಯೇ ಆರ್ಥಿಕವಾಗಿ ಅತಿ ದೊಡ್ಡ ಐದನೇ ರಾಷ್ಟ್ರವಾಗಿ ಇಂದು ನಮ್ಮ ಭಾರತವನ್ನು ನೋಡಬಹುದಾಗಿದೆ. ಇದಕ್ಕೆ ಕಾರಣ ನಮ್ಮ ಪ್ರಧಾನ ಮಂತ್ರಿಗಳು. ಕರೋನಾದಂತ ಸಂದರ್ಭದಲ್ಲಿ ಅಮೆರಿಕ ಚೀನಾ ಬ್ರಿಟನ್ ದೇಶ ಸೇರದಂತೆ ಅನೇಕ ದೇಶಗಳು ಆರ್ಥಿಕವಾಗಿ ತತ್ತರಿಸಿ ಹೋದವು ಆದರೆ ಭಾರತವು ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಕೂಡ ನಿಭಾಯಿಸಿತು ಇದಕ್ಕೆ ಕಾರಣ ನಮ್ಮ ಪ್ರಧಾನಿ ಮೋದಿ ಎಂದರು.
ಜಗತ್ತಿನಲ್ಲಿಯೇ ದೇಶಕ್ಕಾಗಿ ದುಡಿಯುತ್ತಿರುವ ಒಬ್ಬನೇ ಒಬ್ಬ ವ್ಯಕ್ತಿ ಇದ್ದರೆ ಅದು ನರೇಂದ್ರ ಮೋದಿ ಮಾತ್ರ ಎಂದು ರಷ್ಯಾ ಅದ್ಯಕ್ಷ ಪುಟಿನ್ ಸಂದೇಶ ಕಳಿಸಿದ್ದಾರೆ ಇದು ನಮ್ಮ ಹೆಮ್ಮೆ ಎಂದರು.
ಐಎಂಎಫ್ ಸಂಸ್ಥೆಯ ಸೆಕ್ರೆಟರಿ ಜನರಲ್ ರವರು ಹೊರಡಿಸಿರುವ ಒಂದು ಪತ್ರದಲ್ಲಿ 2026 ವರ್ಷಕ್ಕೆ ವಿಶ್ವದ ನಂಬರ್ ಒನ್ ಆರ್ಥಿಕತೆ ಯನ್ನು ನೋಡಬಹುದು ಎಂದಿದ್ದಾರೆ ಹಾಗೆಯೇ ದಿನಕ್ಕೆ 8 ಕಿಲೋಮೀಟರ್ ಮಾತ್ರ ರಸ್ತೆ ನಿರ್ಮಾಣವಾಗುತ್ತಿತ್ತು, ಆದರೆ ಇಂದು 38 ಕಿಲೋಮೀಟರ್ ಉದ್ದದ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕನಿಷ್ಠ 8 ಗಂಟೆ ವಿದ್ಯುತ್ತನ್ನು ನೀಡಲಾಗುತ್ತಿತ್ತು, ಆದರೆ ಇಂದು ಇಪ್ಪತ್ತು ಗಂಟೆಗಳ ಕಾಲ ನಿರಂತರ ವಿದ್ಯುತ್ತನ್ನು ನೀಡಲಾಗುತ್ತಿದೆ. ಎಲ್ಲಾ ಕಾರ್ಯಗಳು ನಮ್ಮ ನರೇಂದ್ರ ಮೋದಿಯ ಹೆಮ್ಮೆ ಎಂದು ಹೊಗಳಿದರು.
ಇದನ್ನೂ ಓದಿ: ಪತ್ರಕರ್ತರಿಗೆ ಹಣದ ಆಮಿಷ: ಬೆತ್ತಲಾದ ಸರ್ಕಾರ
ಕರೋನಾದಂತ ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ಜನ ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಜನರನ್ನು ಚಪ್ಪಾಳೆ ತಟ್ಟಿ ಎಂದಾಗ ಚಪ್ಪಾಳೆ ತಟ್ಟಿದ್ದು ದೀಪವನ್ನು ಹಚ್ಚಿ ಎನ್ನುವ ಕರೆ ಕೊಟ್ಟಾಗ ದೀಪ ಹಚ್ಚಿದ್ದು, ಸ್ವಾತಂತ್ರ ದಿನದ ಅಂಗವಾಗಿ ಪ್ರತಿ ಮನೆಯ ಮೇಲು ತಿರಂಗಾಧ್ವಜ ಹಾರಿಸುವುದಕ್ಕೆ ಮನವಿ ಮಾಡಿದಾಗ ಜನರು ತೋರಿದ ಕಾಳಜಿ ನರೇಂದ್ರ ಮೋದಿಯವರನ್ನು ಒಪ್ಪಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್ , ಮದ್ದೂರು ಬಿಜೆಪಿ ಮುಖಂಡ ಎಸ್ ಪಿ ಸ್ವಾಮಿ, ಬಿಜೆಪಿ ಉಸ್ತುವಾರಿಗಳಾದ ಜಗದೀಶ್ ಹಿರೇಮನಿ, ಭಾರತಿ ಮತ್ತು ಹಲವರಿದ್ದರು.