ಮಂಡ್ಯ ನಗರಕ್ಕೆ ಆಗಮಿಸಿದ ಪದ್ಮಭೂಷಣ, ತ್ರಿವಿಧ ದಾಸೂಹಿ, ನಡೆದಾಡುವ ದೇವರು, ಲಿಂಗೈಕ್ಯ ಡಾ|| ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ಗದ್ದುಗೆಗೆ ತೃತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮ ಶ್ರೀ ಸಿದ್ದಗಂಗಾ ಪ್ರಚಾರ ರಥವನ್ನು ಶಾಸಕರು, ಅಧಿಕಾರಿಗಳು ಮತ್ತು ಶ್ರೀಮಠದ ಭಕ್ತರು ಪುಷ್ಪನಮನ ಸಲ್ಲಿಸುವ ಮೂಲಕ ವೀರಗಾಸೆ, ಪೂಜಾಕುಣಿತ-ತಮಟೆನಾದದೊಂದಿಗೆ ಸ್ವಾಗತಿಸಿದರು.
ಬಳಿಕ ಮೆರವಣಿಗೆಯಲ್ಲಿ ನಗರದ ಪ್ರಮುಖ ರಸ್ತೆಗಳು-ವೃತ್ತಗಳಲ್ಲಿ ಸಂಚರಿಸಿ ನ.21ರಂದು ತುಮಕೂರಿನ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ ನಡೆಯಲಿರುವ ಭಕ್ತಿ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ತಾವುಗಳು ಭಾಗಿಯಾಗಿ ಎಂದು ಜಾನಪದ ತಂಡಗಳೊಂದಿಗೆ ಪ್ರಚಾರ ನಡೆಸಿದರು.
ನಾನು ಕೂಡ ಸಿದ್ದಗಂಗಾ ಮಠದ ವಿದ್ಯಾರ್ಥಿ ಆಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರಕೊಟ್ಟು, ಅನ್ನವನ್ನೂ ಕೊಟ್ಟು ಒಂದು ಒಳ್ಳೆಯ ಕಾಯಕ ಜೀವನವನ್ನೂ ರೂಪಿಸಿಕೊಟ್ಟವರು ಸಿದ್ದಗಂಗಾ ಶ್ರೀಗಳು. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಾಗ ನಾವೆಲ್ಲರು ತುಂಬಾ ಸಂಬ್ರಮ ಪಟ್ಟೆವು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಅಪರಜಿಲ್ಲಾಧಿಕಾರಿ ಡಾ.ಎಚ್.ಎನ್.ನಾಗರಾಜ್, ಜಿ.ಪಂ.ಸಿಇಓ ಶಾಂತಹುಲ್ಮನಿ, ಕೀಲಾರ ರಾಧಕೃಷ್ಣ, ವೀರಶೈವ-ಲಿಂಗಾಯತ ಸಮುದಾಯದ ಮುಖಂಡರಾದ ವಕೀಲ ಗುರುಪ್ರಸಾದ್, ಮಂಡಿಬೆಟ್ಟಹಳ್ಳಿ ಮಂಜುನಾಥ್, ವಿವಿಧ ಮಠಗಳ ಶಿವಯೋಗಿಗಳು ಪಾಲ್ಗೊಂಡಿದ್ದರು.