Thursday, September 19, 2024

ಪ್ರಾಯೋಗಿಕ ಆವೃತ್ತಿ

ರಸ್ತೆ ಬದಿ ಟೀ ಸವಿದ ಸಚಿವ ಆರ್.ಅಶೋಕ್

ಮಂಡ್ಯ ನಗರದ ಮಹಾವೀರ ವೃತ್ತದಲ್ಲಿರುವ ನಂದಿನಿ ಪಾರ್ಲರ್ ನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಜೊತೆಗೂಡಿ ಟೀ ಕುಡಿದಿದ್ದು ಸಾರ್ವಜನಿಕರ ಗಮನ ಸೆಳೆಯಿತು.

ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಗಾಗ್ಗೆ ಈ ನಂದಿನಿ ಪಾರ್ಲರ್ ಗೆ ಭೇಟಿ ನೀಡುತ್ತಾರೆ. ಅದರಂತೆ ಇಂದು ಮಂಡ್ಯ ನಗರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವ ಆರ್.ಅಶೋಕ್, ಕಾರ್ಯಕ್ರಮ ಮುಗಿದ ನಂತರ ಸಚ್ಚಿದಾನಂದ ಜೊತೆಗೂಡಿ ಮಹಾವೀರ ವೃತ್ತದಲ್ಲಿ ರಸ್ತೆ ಬದಿಯಲ್ಲಿರುವ ನಂದಿನಿ ಪಾರ್ಲರ್ ನಲ್ಲಿ ಕುಳಿತು ಬೆಲ್ಲದ ಟೀ ಸವಿದರು.

ಈ ಸಂದರ್ಭದಲ್ಲಿ ನಂದಿನಿ ಪಾರ್ಲರ್ ಮಾಲೀಕನಿಗೆ ತುಂಬಾ ರುಚಿಯಾದ ಟೀ ಮಾಡಿಕೊಟ್ಟಿದ್ದೀಯಾ ಎಂದು ಪ್ರಶಂಸೆ ವ್ಯಕ್ತಪಡಿಸಿ ಆತನಿಗೆ ಹೂವಿನ ಹಾರ ಹಾಕಿ ಅಲ್ಲಿಂದ ತೆರಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!