Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಣ ಡ್ರಾ ಮಾಡಲು ಬಂದ ರೈತನಿಗೆ ಥಳಿಸಿದ ಮದ್ದೂರು ಪೋಲಿಸರು

ಡಿಪಾಸಿಟ್ ಇಟ್ಟಿದ್ದ ಹಣ ಪಡೆಯಲು ಹೋದ ರೈತನಿಗೆ ಹಣ ಕೊಡದಶಿಂಷಾ ಬ್ಯಾಂಕ್ ಸಿಬ್ಬಂದಿಗಳು ಪೋಲಿಸರನ್ನು ಕರೆಸಿ ಅವರ ಮೂಲಕ ಹಲ್ಲೆ ನಡೆಸಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ವೈದ್ಯನಾಥಪುರದ ರೈತ ವಿ‌.ಎಲ್‌.ಸುರೇಶ್ ಇಂದು ಮಧ್ಯಾಹ್ನ ಹಣ ಡ್ರಾ ಮಾಡಲು ಶಿಂಷಾ ಬ್ಯಾಂಕಿಗೆ ತೆರಳಿದ್ದಾರೆ.ಹಣ ನೀಡಲು ಸತಾಯಿಸಿದ ಬ್ಯಾಂಕ್ ಸಿಬ್ಬಂದಿ ಕೊನೆಯದಾಗಿ ಪೋಲಿಸರನ್ನು ಕರೆಸಿ ರೈತ ಸುರೇಶ ಅವರ ಕೆನ್ನೆಗೆ ಎರಡು ಬಾರಿ ಹೊಡೆಸಿದ್ದಾರೆ.

ನನ್ನ ಹಣ ಡ್ರಾ ಮಾಡಲು ಹೋದ ನನಗೆ ಹಣ ನೀಡದೆ ಶಿಂಷಾ ಬ್ಯಾಂಕ್ ಸಿಬ್ಬಂದಿಗಳು ಮದ್ದೂರು ಠಾಣೆ ಪೋಲಿಸರನ್ನ ಕರೆಸಿ ಕಪಾಳಕ್ಕೆ ಹೊಡೆಸಿದ್ದಾರೆ.ನಾನಿಟ್ಟ ಹಣ ಕೇಳಲು ಹೋದ ತಪ್ಪಿಗೆ ನನಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ರೈತ ಸುರೇಶ್ ಅಳಲು ತೋಡಿಕೊಂಡರು.

ರೈತ ಸುರೇಶ್ ಮೇಲೆ ಏಕಾಏಕಿ ಬಂದು ಹಲ್ಲೆ ಮಾಡಿದ ವಜ್ರ ಪೋಲಿಸರ ಮೇಲೆ ಎಸ್ಪಿ ಯತೀಶ್ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!