ಶಿಥಿಲಗೊಂಡ ವಿದ್ಯುತ್ ಕಂಬ ಬದಲಾಯಿಸಿ, ಹೊಸ ಕಂಬ ಹಾಕಿದ ನಂತರವೂ ಖಾಸಗಿ ಸುದ್ದಿ ವಾಹಿನಿಯೊಂದು ಕಂಬ ಬದಲಾವಣೆ ಮಾಡಿಲ್ಲ ಎಂದು ಸುದ್ದಿ ಬಿತ್ತರ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಚೆಸ್ಕಾಂ ಮಂಡ್ಯ ಉಪ ವಿಭಾಗದ ಎಇಇ ಎಚ್.ಇ.ಮಹಾದೇವ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಡ್ಯ ನಗರದ ನಂದ ಚಿತ್ರಮಂದಿರದ ಹಿಂಭಾಗದಲ್ಲಿರುವ ಇಂದಿರಾ ಬಡಾವಣೆಯಲ್ಲಿ ಶಿಥಿಲಗೊಂಡಿದ್ದ ವಿದ್ಯುತ್ ಕಂಬವನ್ನು ನ.5 ರಂದು ಬದಲಾವಣೆ ಮಾಡಿ ಹೊಸ ಕಂಬವನ್ನು ಹಾಕಲಾಗಿದೆ.
ವಾಸ್ತವ ಸಂಗತಿ ಹೀಗಿದ್ದರೂ ಖಾಸಗಿ ಸುದ್ದಿ ವಾಹಿನಿಯಲ್ಲಿ ನ.7 ರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಯಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬ ಬದಲಾವಣೆಯಾಗದಿರುವ ಬಗ್ಗೆ ಸುದ್ದಿ ಬಿತ್ತರವಾಗಿರುತ್ತದೆ. ಇದು ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು ಎಂದಿರುವ ಅವರು, ಇಂತಹ ಶಿಥಿಲಗೊಂಡ ವಿದ್ಯುತ್ ಕಂಬಗಳು ಕಂಡು ಬಂದರೆ ತಕ್ಷಣ ಚೆಸ್ಕಾಂ ಗಮನಕ್ಕೆ ತಂದರೆ ಅದನ್ನು ಬದಲಾಯಿಸುವುದಾಗಿ ತಿಳಿಸಿದ್ದಾರೆ.