ಮದ್ದೂರು ತಾಲ್ಲೂಕಿನ ಮಾದರಹಳ್ಳಿ ಗ್ರಾಮದ ಸುರೇಂದ್ರ ಎಂಬುವವರ ಮಗ ಸುನೀಲ್ (25) ಎಂಬಾತ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಮೈಸೂರು ಸಮೀಪದಲ್ಲಿ ಇಲವಾಲದ ಬಳಿ ಕಳೆದ ಮಂಗಳವಾರ ರಾತ್ರಿ ನಡೆದಿದೆ.
ಮೃತ ಸುನೀಲ್ ಕಳೆದ ಒಂದೂವರೆ ವರ್ಷಗಳಿಂದ ಟಿಪ್ಪರ್ ಚಾಲಕನಾಗಿ ದೀಲಿಪ್ ಎಂಬುವವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮಂಗಳವಾರ ಮಧ್ಯಾಹ್ನ ಮೈಸೂರಿನ ಇಲವಾಲ ಸಮೀಪದ ಚೌಡೇಶ್ವರಿ ರೆಡಿಮಿಕ್ಸ್ ಕಾಂಕ್ರೀಟ್ ಪ್ಲಾಂಟ್ ಗೆ ಲೋಡ್ ಅನ್ನು ತೆಗೆದುಕೊಂಡು ಹೋಗಿದ್ದ.
ಟಪ್ಪರ್ ಅನ್ ಲೋಡ್ ಮಾಡಿದ ನಂತರ, ಅದೇ ಟಿಪ್ಪರ್ ಕೆನೋಪಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈತನ ಸಾವಿನ ಬಗ್ಗೆ ಕುಟುಂಬವರು ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯಾಂಶವನ್ನು ತಿಳಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕೆ.ಆರ್.ಎಸ್.ಪೊಲೀಸ್ ಠಾಣೆಗೆ ಮೃತನ ಸಹೋದರ ಅನಿಲ್ ದೂರು ನೀಡಿದ್ದಾರೆ.