Friday, October 18, 2024

ಪ್ರಾಯೋಗಿಕ ಆವೃತ್ತಿ

ಡಿಸಿ ಸೂಚನೆ : ಬಂಡೂರಿನಲ್ಲಿ ಅಕ್ರಮ ಮದ್ಯ ವಶ

”ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಕಾರ್ಯಕ್ರಮದಲ್ಲಿ ಮದ್ಯಮಾರಾಟದ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಬಕಾರಿ ಅಧಿಕಾರಿಗಳು ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದ ಕುಮಾರಸ್ವಾಮಿ ಎಂಬುವವರ ಮನೆಯ ಮೇಲೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದು, ಆರೋಪಿ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ.

ವ್ಯಕ್ತಿಯೊಬ್ಬ ನನ್ನ ಅರ್ಜಿಯನ್ನು ನೋಡಿ, ನಾನು ನನ್ನ ಜಮೀನು ಉದ್ದಾರ ಮಾಡಿ ಅಂತ
ಕೇಳಲ್ಲ, ಜನರು ಬದುಕಲಿ ಅಂತ ಕೇಳಿಕೊಳ್ಳುತ್ತೇನೆ ಮೊದಲು ನನ್ನ ಅರ್ಜಿಯನ್ನು
ನೋಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿಯ ಅರ್ಜಿ ಸಲ್ಲಿಸಿದರು. ಆ ವ್ಯಕ್ತಿಯ ಮನವಿ ಮೇರೆಗೆ ಅರ್ಜಿಯನ್ನು ಹುಡುಕಿ ನೋಡಲಾಗಿ ಬಂಡೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದದು ತಿಳಿದು ಬಂತು.

ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಹೆಚ್.ಎನ್.ಗೋಪಾಲಕೃಷ್ಣ ಅವರು ಅಬಕಾರಿ ಅಧಿಕಾರಿಗಳಿಗೆ ಕೂಡಲೇ  ಕೈಗೊಳ್ಳುವಂತೆ ಸೂಚನೆ ನೀಡಿದರು. ಆ ವ್ಯಕ್ತಿ ಜೊತೆಯಲ್ಲಿಯೇ ಬಂಡೂರು ಗ್ರಾಮಕ್ಕೆ ಹೊರಟ ಅಬಕಾರಿ ಅಧಿಕಾರಿಗಳು ಕುಮಾರಸ್ವಾಮಿ ಎಂಬುವವರ ಅಂಗಡಿ ಮನೆಗೆ ದಾಳಿ ಮಾಡಿ ಮನೆಯಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!