ಮದ್ದೂರಿನಿಂದ ಹೊರನಾಡು ದೇವಸ್ಥಾನಕ್ಕೆ ತೆರಳುತ್ತಿದ್ದ ನಾಲ್ಕು ಮಂದಿ ವಕೀಲರ ಪೈಕಿ ಪ್ರವೀಣ್(35) ಮೃತಪಟ್ಟಿದ್ದರೆ, ಮತ್ತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಗೆ ತೆರಳುತ್ತಿದ್ದಾಗ, ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುಳ್ಳವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಬಿದ್ದು ವಕೀಲರಾದ ಪ್ರವೀಣ್ ಕಾರಿನಲ್ಲಿ ಪ್ರಾಣ ಬಿಟ್ಟಿದ್ದಾರೆ. ಎನ್ನಲಾಗುತ್ತಿದೆ. ಕಾರು ಕೆಳಗೆ ಉರುಳಿದ ರಭಸಕ್ಕೆ ಏರ್ ಬ್ಯಾಗ್ ಒಪನ್ ಆಗಿ, ಸೀಟಿನ ಬೆಲ್ಟ್ ಲಾಕ್ ಆಗಿದ ಪರಿಣಾಮ ಹೊರ ಬರಲಾಗಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಮೂವರು ಈಜಿ ಕೊಂಡು ದಡ ಸೇರಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಮೃತ ದೇಹವನ್ನು ನರಸಿಂಹರಾಜಪುರದ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತರಲಾಗಿದೆ.