ಮದ್ದೂರು ತಾಲ್ಲೂಕಿನ ಡಿ.ಹೊಸೂರು ಗ್ರಾಮದಲ್ಲಿ ನ.24ರಂದು ಸಂಜೆ 4 ಗಂಟೆಗೆ ಅಂಬರೀಶ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಅನಾವರಣ ಹಾಗೂ ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಂಬರೀಶ್ ಅಭಿಮಾನಿ ಉಮೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದೆ ಸುಮಲತಾ ಅಂಬರೀಶ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ವಿಶೇಷ ಅತಿಥಿಯಾಗಿ ಬಿ.ಬಿ.ಎಂ.ಪಿ ಮಾಜಿ ಮೇಯರ್ ರಾಮ್ ಮೋಹನ್ ರಾಜ್ ಭಾಗವಹಿಸುವರು. ಮುಖ್ಯ ಅತಿಥಿಗಳಾಗ ನಟ ಅಭಿಷೇಕ್ ಅಂಬರೀಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಭಾಗವಹಿಸುವರು ತಿಳಿಸಿದರು.
ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಸಮಾಜ ಸೇವಕ ಉದಯ್ ಕದಲೂರು, ಕಾಂಗ್ರೆಸ್ ಮುಖಂಡ ಗುರುಚರಣ್, ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಮಾಜಿ ಶಾಸಕರಾದ ಬಿ.ರಾಮಕೃಷ್ಣ, ಚೆಲುವರಾಯಸ್ವಾಮಿ, ಹೆಮ್ಮನಹಳ್ಳಿ ಗ್ರಾ.ಪಂ.ಅಧ್ಯಕ್ಷ ನಂದೀಶ್ ಗೌಡ, ಸಮಾಜ ಸೇವಕರಾದ ರಾಜಣ್ಣ, ರಘು, ನಟ ಮೈಕೋ ನಾಗರಾಜು, ಉಪನ್ಯಾಸಕ ಪುಟ್ಟರಾಜು ಹಾಗೂ ಮುಖಂಡ ನಾಗೇಶ್ ಭಾವಹಿಸುವರು ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಬೇಲೂರು ಸೋಮಶೇಖರ್, ಲೋಕೇಶ್, ಕುಮಾರ್, ರಾಮಚಂದ್ರು, ಮಲ್ಲೇಶ್ ಉಪಸ್ಥಿತರಿದ್ದರು.