ಮಂಡ್ಯ ತಾಲೂಕಿನ ಹುಲಿವಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಜನತೆಗೆ ಶುದ್ಧ ಕುಡಿಯುವ ನೀರಿನ ವಾಟರ್ ಕ್ಯಾನ್ ಗಳನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ.ಎಚ್.ಕೃಷ್ಣ ಮನೆ ಮನೆಗೆ ತೆರಳಿ ಇಂದು ವಿತರಣೆ ಮಾಡಿದರು.
ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಡಾ.ಕೃಷ್ಣ ಮಾತನಾಡಿ, ಗ್ರಾಮೀಣ ಜನತೆ ಹೊಲ ಮತ್ತು ಕೃಷಿ ಚಟುವಟಿಕೆಗೆ ಜಮೀನುಗಳ ಕಡೆ ತೆರಳಿ ಹಲವು ಸಮಯಗಳ ಕಾಲ, ಅಲ್ಲೇ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ವಾಟರ್ ಕ್ಯಾನ್ ಉಪಯುಕ್ತವಾಗಲಿದೆ ಎಂದರು.
ಮನೆಗಳಲ್ಲೂ ಈ ವಾಟರ್ ಕ್ಯಾನ್ಗಳ ಮೂಲಕ ಸೂಕ್ತ ಕುಡಿಯುವ ನೀರನ್ನು ಸಂಗ್ರಹಿಸಿಕೊಂಡು ಉಪಯೋಗಿಸುವುದು ಆರೋಗ್ಯಕ್ಕೆ ಉತ್ತಮ. ಗ್ರಾಮೀಣ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮನೆಮನೆಗೆ ತೆರಳಿ ವಾಟರ್ ಕ್ಯಾನ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳುವ ಕಾರ್ಯ ಜನತೆಯದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹುಲಿವಾನ ಗ್ರಾ.ಪಂ. ಸದಸ್ಯರಾದ ಹೆಚ್.ಎಂ.ರವಿಕುಮಾರ್ ಮತ್ತು ಬೋರೇಗೌಡ, ಯೋಗೇಶ್, ನವೀನ್, ರಮೇಶ್, ರೈಸ್ ಮಿಲ್ ರವಿ, ಯೋಗ, ಶಿವ ಗುಡ್ಡಪ್ಪ, ಶಿವಪ್ಪ, ಚಂದ್ರು, ಅಂಬಿ ರಮೇಶ್, ಎಲ್.ಐ.ಸಿ. ಕೃಷ್ಣ, ಅಂಗಡಿ ಸಿದ್ಧರಾಮ, ಶಶಾಂಕ, ಮುರಳಿ, ವೇಣುಗೋಪಾಲ ಸ್ವಾಮಿ, ಮತ್ತಿತರರ ತಂಡ ಇಂದು ಮುಂಜಾನೆ ವಿವಿಧ ಗ್ರಾಮಗಳಲ್ಲಿ ನೀರಿನ ಕ್ಯಾನ್ ವಿತರಣೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದರು.