ಶಾಲೆಯಿಂದ ವಾಪಸು ಮನೆಗೆ ತೆರಳುವ ಸಂದರ್ಭದಲ್ಲಿ ಶಾಲಾ ಬಾಲಕರಿಬ್ಬರು ನಾಪತ್ತೆಯಾಗಿರುವ ಘಟನೆ ಮದ್ದೂರು ತಾಲ್ಲೂಕಿನಲ್ಲಿ ನಡೆದಿದೆ.
ಮಾದಾಪುರ ದೊಡ್ಡಿ ಗ್ರಾಮದ ಎಂ ಯು ಶ್ರೇಯಸ್ ಗೌಡ ಹಾಗೂ ದೇಶಹಳ್ಳಿ ಗ್ರಾಮದ ಶರಣ್ ಪಾಟೇಲ್ ನಾಪತ್ತೆಯಾದ ಬಾಲಕರು. ಇವರು ಮದ್ದೂರು ಪಟ್ಟಣದ ಕೊಪ್ಪ ಸರ್ಕಲ್ ಬಳಿಯ ಪೂರ್ಣಪ್ರಜ್ಞಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಘಟನೆ ವಿವರ
ಎಂದಿನಂತೆ ಶಾಲೆಗೆ ಶುಕ್ರವಾರ ಆಗಮಿಸಿ ಶಾಲಾ ಅವಧಿ ಮುಗಿದ ನಂತರ ಶಾಲಾ ವಾಹನದಲ್ಲಿ ವಾಹನದಲ್ಲಿ ತಮ್ಮ ಗ್ರಾಮಕ್ಕೆ ತೆರೆಳುವ ಸಂದರ್ಭದಲ್ಲಿ ಅಂಗಡಿಗೆ ತಿಂಡಿ ತರಲು ಹೋಗಿ ಬರುತ್ತೇವೆ ಎಂದು ಡ್ರೈವರ್ ತಿಳಿಸಿ ಹೋದ ಬಾಲಕರು, ಮತ್ತೆ ವ್ಯಾನ್ ಬಳಿ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಚಾಲಕ ಶಾಲಾ ಆಡಳಿತಕ್ಕೆ ವಿಷಯ ತಿಳಿಸಿದ. ರಾತ್ರಿವರಗೆ ಹುಡುಕಾಟ ನಡೆಸಿ ಆಡಳಿತ ಮಂಡಳಿ ಕೊನೆಗೆ ಪೊಲೀಸರಿಗೆ ದೂರು ನೀಡಿದೆ.
ದೂರು ದಾಖಲಿಸಿಕೊಂಡ ಮದ್ದೂರು ಪಟ್ಟಣ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ