ದೇಶಪ್ರೇಮದ ಪಾಠ ಮಾಡುವ ಬಿಜೆಪಿ ಕಾರ್ಯಕರ್ತರೇ ಪಾಕಿಸ್ತಾನದ ಪರ ಘೋಷಣೆ ಕೂಡಿದ್ದು, ಬಿಜೆಪಿ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಘೋಷಣೆ ಕೂಗಿದ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಭಿಲಾವಲ್ ಭುಟ್ಟೋ ವಿರುದ್ಧ ಬಿಜೆಪಿ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಮಂಡ್ಯದಲ್ಲಿಯೂ ಬಿಜೆಪಿ ಕಾರ್ಯಕರ್ತರು ಭುಟ್ಟೋ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ, ‘ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ ಜಿಂದಾಬಾದ್’ ಎಂದು ಎರಡು ಬಾರಿ ಕೂಗಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಬಿಜೆಪಿ ಮುಖಂಡರು ಕಾರ್ಯಕರ್ತರ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು, ಬಂಧನಕ್ಕೆ ಒತ್ತಾಯಿಸಿದ್ದಾರೆ. “ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವುದು ಬಿಜೆಪಿ ಕೇಸರಿ ಪಡೆಯ ನೈಜ ರೂಪ. ಇವರು ಬೇರೆ ಯವರಿಗೆ ದೇಶಪ್ರೇಮದ ಪಾಠ ಮಾಡ್ತರೆ. ಹಸಿರು ಶಾಲು ಹಾಕೊಂಡು ಯಾರಾದರೂ ಹೀಗೆ ಹೇಳಿದ್ರೆ ಇಷ್ಟರೊಳಗೆ ದೇಶದ್ರೋಹದ ಕೇಸ್ ಹಾಕಿ ಜೈಲಿಗೆ ಹಾಕಿರವ್ರು” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಜಿಂದಾಬಾದ್ ಜಿಂದಾಬಾದ್… #ಪಾಕಿಸ್ತಾನ್_ಜಿಂದಾಬಾದ್.. ಇದು ಬಿಜೆಪಿ ಕೇಸರಿ ಪಡೆಯ ನೈಜ ರೂಪ. ಈ ಬಡ್ಡಿಮಕ್ಳು ಬೇರೆ ಯವರಿಗೆ ದೇಶಪ್ರೇಮದ ಪಾಠ ಮಾಡ್ತರೆ.😡
ಹಸಿರು ಶಾಲು ಹಾಕೊಂಡು ಯಾರಾದರೂ ಹೀಗೆ ಹೇಳಿದ್ರೆ ಇಷ್ಟರೊಳಗೆ ದೇಶದ್ರೋಹದ ಕೇಸ್ ಹಾಕಿ ಜೈಲಿಗೆ ಹಾಕಿರವ್ರು.🤗pic.twitter.com/XqhPk8c9SL— ಗಡ್ಡಪ್ಪ✍️ (@Gaddapa) December 18, 2022
“>
“ಬಿಜೆಪಿಯ ನಿಜ ಬಣ್ಣ ಬಯಲಾಗಿದೆ.. ಪಾಕಿಸ್ತಾನ ಜಿಂದಾಬಾದ್ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಮುಖ್ಯಮಂತ್ರಿ CM ಬೊಮ್ಮಾಯಿ ಅವರಿಗೆ ದಮ್ಮು ತಾಕತ್ತು ಇದ್ರೆ ಇವರನ್ನೆಲ್ಲ ಜೈಲುಗಟ್ಟುವರೇ..” ಎಂದು ನಿಜಾಮ್ ಜಾಮ್ದಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ದೇಶದ್ರೋಹಿ ಬಿಜೆಪಿ ಕಾರ್ಯಕರ್ತರಿಗೆ ಧಿಕ್ಕಾರ.
ಮಂಡ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಯಿತು. pic.twitter.com/cvwHU2znTu
— INC BELAGAVI RURAL (@BelagaviRural) December 17, 2022
ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ದೇಶದ್ರೋಹಿ ಬಿಜೆಪಿ ಕಾರ್ಯಕರ್ತರಿಗೆ ಧಿಕ್ಕಾರ. ಮಂಡ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿನ್ ಲಾಡನ್ ಸತ್ತಿದ್ದಾನೆ , ಗುಜರಾತಿನ ಕಟುಕ ಬದುಕಿದ್ದಾನೆ ಎಂದಿದ್ದ ಪಾಕಿಸ್ತಾನ ಸಚಿವ
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಾಕ್ ಸಚಿವ ಭಿಲಾವಲ್ ಭುಟ್ಟೋ, “ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ, ಗುಜರಾತಿನ ಕಟುಕ ಇನ್ನೂ ಬದುಕಿದ್ದಾನೆ. ಆತ ಭಾರತದ ಪ್ರಧಾನಿಯಾಗಿದ್ದಾನೆ” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯು ಬಿಜೆಪಿಯ ಪಾಳಯದಲ್ಲಿ ಭಾರೀ ಆಕ್ರೋಶವನ್ನುಂಟು ಮಾಡಿತ್ತು. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಭಿಲಾವಲ್ ಭುಟ್ಟೋ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.