ಮಂಡ್ಯ ಹೊರವಲಯದ ಅಮರಾವತಿ ಹೋಟೆಲ್ ಬಳಿ ಆಪೆ ಆಟೋ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿ ಮೂವರು ಗಾಯಗೊಂಡ ಘಟನೆ ಭಾನುವಾರ ರಾತ್ರಿ 7.30 ರಲ್ಲಿ ನಡೆದಿದೆ.
ಪಾಂಡವಪುರ ತಾಲ್ಲೂಕಿನ ಗಿಡದ ಹೊಸಹಳ್ಳಿ ಗ್ರಾಮದ ಈರೇಗೌಡ ಅವರ ತಲೆಗೆ ತೀವ್ರ ಗಾಯವಾಗಿದ್ದು,ಮೂವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಈರೇಗೌಡರನ್ನು ಪಕ್ಕದಲ್ಲಿದ್ದ ಸ್ಯಾಂಜೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಕಾರಿನಲ್ಲಿದ್ದವರು ಆರು ಮಂದಿ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ.
ಬೆಂಗಳೂರಿನಿಂದ ಆಪೆ ಆಟೋ(ಕೆಎ 54 6848) ಬರುತ್ತಿದ್ದು ಕಾರು ಬೆಂಗಳೂರಿನ ಕಡೆ ತೆರಳುತ್ತಿದ್ದಾಗ ಮುಖಾಮುಖಿ ಢಿಕ್ಕಿಯಾಗಿದೆ.