ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ವತಿಯಿಂದ ಮಂಡ್ಯ ತಾಲ್ಲೂಕಿನ ಎಚ್.ಮಲ್ಲಿಗೆರೆ ಫಾರ್ಮ್ ನಲ್ಲಿರುವ ‘ಗಾಂಧಿ ಗ್ರಾಮ’ವನ್ನು ರೂ. 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಸಿ.ಎಸ್. ಪುಟ್ಟರಾಜು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮಗಳ ಅಭಿವೃದ್ಧಿ ಮಾಡಬೇಕೆನ್ನುವ ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆಯನ್ನು ಸಾಕಾರಗೊಳಿಸುವಂತೆ ‘ಗ್ರಾಂಧಿ ಗ್ರಾಮ’ದಲ್ಲಿ ಅಭಿವೃದ್ಧಿ ಕೆಲಸಗಳು ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ದಿ.ಜಿ.ಮಾದೇಗೌಡರು ‘ಗಾಂಧಿ ಗ್ರಾಮ’ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ಗೌಡರ ಆಶಯ, ನಂಬಿಕೆಯನ್ನು ಬಲಪಡಿಸುವಂತೆ ‘ಗಾಂಧಿ ಗ್ರಾಮ’ದ ಅಭಿವೃದ್ಧಿ ಕೆಲಸಗಳಾಗಿ ಸಮುದಾಯಕ್ಕೆ ಅನುಕೂಲ ಆಗಲಿ ಎಂದರು.
ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ,ವಿಧಾನ ಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ ಮಾತನಾಡಿ, ಗಾಂಧೀಜಿ ಅವರ ಚಿಂತನೆ, ಆಶಯಗಳಂತೆ ಮಾದರಿಯಾಗಿ ‘ಗಾಂಧಿ ಗ್ರಾಮ’ವನ್ನು ಅಭಿವೃದ್ಧಿ ಪಡಿಸಲಾಗುವುದು.ಎಲ್ಲರ ಸಹಕಾರ ಪಡೆದು ಗಾಂಧಿ ಗ್ರಾಮದ ಅಭಿವೃದ್ಧಿಗೆ ಮುಂದಾಗುವೆ ಎಂದರು.
ಎಚ್.ಮಲ್ಲಿಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಮ್ಮ, ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯೆ ಭಾಗಮ್ಮ, ಟ್ರಸ್ಟ್ ಪದಾಧಿಕಾರಿಗಳಾದ ಬಿ.ಎಂ.ನಂಜೇಗೌಡ, ಎನ್.ರಾಜು, ಅಂಜನಾ ಶ್ರೀಕಾಂತ್, ಮಾದಪ್ಪ, ನಾಗರತ್ನ, ಜಯರಾಮು, ಪ್ರಶಾಂತ್ ಬಾಬು, ಎಂ.ರಾಜಣ್ಣ, ರಾಮಲಿಂಗಯ್ಯ ಹಾಗೂ ಎಚ್.ಮಲ್ಲಿಗೆರೆ, ಶಂಭುನಹಳ್ಳಿ, ಸಂಪಳ್ಳಿ, ಹೊಸಳ್ಳಿ, ಬೀರಗೌಡನಹಳ್ಳಿ ಗ್ರಾಮಸ್ಥರು ಹಾಜರಿದ್ದರು.