Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ‘ಕೈ’ ಬಲಪಡಿಸಲು ಪಿ.ಎಂ.ನರೇಂದ್ರಸ್ವಾಮಿಗೆ ಬೆಂಬಲ – ಮಂಜುನಾಥ್

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಲಿಂಗಾಯತ ಮುಖಂಡ ಹಾಗೂ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಹೆಚ್.ಸಿ. ತಿಳಿಸಿದರು.

ಮಂಡ್ಯ ಜಿಲ್ಲೆಯಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಮಳವಳ್ಳಿ. ಈ ದೃಷ್ಟಿಯಿಂದ ಹಿಂದೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿ ಅತಿ ಹೆಚ್ಚು ಅನುದಾನವನ್ನ ತಂದ ಹೆಗ್ಗಳಿಕೆ ಪಿಎಂ ನರೇಂದ್ರಸ್ವಾಮಿ ಅವರದು. ಆದ್ದರಿಂದ ಪ್ರಜ್ಞಾವಂತ ಮತದಾರರು, ಅಭಿವೃದ್ಧಿಯ ದೃಷ್ಟಿಯಿಂದ ನರೇಂದ್ರಸ್ವಾಮಿ ಅವರನ್ನು  ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಬಹಳಷ್ಟು ಕೃಷಿಕರಿಗೆ ಅನುಕೂಲವಾಗುವ ಯೋಚನೆಗಳನ್ನು ತರುವ ಭರವಸೆ ನೀಡಿದೆ. ಅದರ ಜೊತೆಯಲ್ಲಿ ಬಹಳ ಅನುಭವ ರಾಜಕಾರಣಿಯಾಗಿರುವ ನರೇಂದ್ರಸ್ವಾಮಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಅಭ್ಯರ್ಥಿ ಜಿ ಮುನಿರಾಜು ಅವರು ಮಂಜುನಾಥ್ ಬೆಂಬಲ ತಮಗಿದೆ ಎಂದು ಎಡಿಟ್ ಮಾಡಿಸಿದ  ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ನಮ್ಮ ಬೆಂಬಲವೆನಿದ್ದರೂ ಕಾಂಗ್ರೆಸ್ ಅಭ್ಯರ್ಥಿಗೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೊದೇನಕೊಪ್ಪಲು ಬೋರಲಿಂಗೇಗೌಡ, ಬಂಡೂರು ಮಂಜುನಾಥ್, ಭೀಮನಹಳ್ಳಿ ಅಂದಾನಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!