ಕೆ ಆರ್ ಪೇಟೆ ತಾಲ್ಲೂಕು ಪಿ ಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಜಯಶೀಲ ರಾಮೇಗೌಡ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಕಾಪನಹಳ್ಳಿ ಕಾಂತರಾಜೇಗೌಡ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಜಯಶೀಲ ರಾಮೇಗೌಡ ಹಾಗೂ ಶಂಭುಲಿಂಗೇಗೌಡ ಅವರು ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ 8 ಮತಗಳನ್ನು ಪಡೆದು ಜಯಶೀಲರಾಮೇಗೌಡ ಆಯ್ಕೆಯಾದರು. ಎದುರಾಳಿ ಶಂಭುಲಿಂಗೇಗೌಡ 6 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿ ಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಆನಂದ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷೆ ಜಯಶೀಲರಾಮೇಗೌಡ ಮಾತನಾಡಿ, ನನ್ನನ್ನು ಪಕ್ಷಾತೀತವಾಗಿ ಅಧ್ಯಕ್ಷರಾಗಲು ಸಹಕರಿಸಿದ ನಿರ್ದೇಶಕರು ಹಾಗೂ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸಿದರು. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕ್ ನ ಅಭಿವೃದ್ಧಿಗೆ ಹಾಗೂ ಬ್ಯಾಂಕ್ ನ ಷೇರುದಾರರಾದ ರೈತರ ಪರವಾಗಿ ನಿಲ್ಲುತ್ತೇನೆ ಹಾಗೂ ಸಕಾಲಕ್ಕೆ ರೈತರಿಂದ ಸಾಲವನ್ನು ಮರುಪಾವತಿ ಮಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕಬ್ಬಲಗೆರೆ ಪುಟ್ಟಸ್ವಾಮಿಗೌಡ ಮಾತನಾಡಿ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕ್ ನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ರೈತರಿಗೆ ಸಕಾಲಕ್ಕೆ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ರೈತರು ಬ್ಯಾಂಕ್ ನಿಂದ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.
ಬ್ಯಾಂಕ್ ಉಪಾಧ್ಯಕ್ಷ ಬಣ್ಣೇನಹಳ್ಳಿ ಧನಂಜಯ, ಅಗಸರಹಳ್ಳಿ ಗೋವಿಂದರಾಜು, ಕಾಂತರಾಜು, ಬ್ಯಾಂಕ್ ನಿರ್ದೇಶಕರಾದ ಏಜಾಜ್ ಪಾಷಾ, ಕಮಲಮ್ಮ, ಚಂದ್ರೇಗೌಡ, ನಾಗರಾಜು, ರಾಮಕೃಷ್ಣ, ನಾಗರಾಜು,ರಮೇಶ್, ಸುರೇಶ್, ರಾಮೇಗೌಡ,ಕಾಮನಹಳ್ಳಿ ಶ್ರೀಧರ್, ಮುದ್ದೇಗೌಡ, ಶಿವಕುಮಾರ್, ಎ.ಎನ್.ಗೋವಿಂದರಾಜು, ರಾಜಾನಾಯಕ್ ,ಅಂಜನಿ, ರಾಧ,ಬಿ. ಪಿ ನಾಗೇಶ್ ಇತರರು ಉಪಸ್ಥಿತರಿದ್ದರು.