ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಉದ್ಯೋಗ ವಿಕಸನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅವಕಾಶ ವಂಚಿತ ವಿಕಲಚೇತನರನ್ನು ಸಮರ್ಥರನ್ನಾಗಿಸುವ ಉದ್ದೇಶದಿಂದ ವಿವಿಧ ತರಬೇತಿಗಳನ್ನು ನೀಡಲಾಗುವುದು ಎಂದು ಸಂಸ್ಥೆಯ ಜಿಲ್ಲಾ ಸಂಯೋಜಕ ರಂಗಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರಬೇತಿಯ ಅವಧಿ 3 ತಿಂಗಳಾಗಿದ್ದು, ಕಂಪ್ಯೂಟರ್, ಇಂಗ್ಲೀಷ್ ಕಮ್ಯೂನಿಕೇಷನ್ ಸ್ಕಿಲ್ಸ್, ಬಿಪಿಓ ಸ್ಕಿಲ್ಸ್ ವಿಭಾಗಗಳಲ್ಲಿ ತರಬೇತಿಯನ್ನು ನೀಡಲಾಗುವುದು, ತರಬೇತಿ ಪಡೆಯಲು ಹತ್ತನೇ ತರಗತಿಯನ್ನು ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು, ವಯಸ್ಸಿನ ಮಿತಿ 18 ರಿಂದ 35ರೊಳಗಿರಬೇಕು ಎಂದರು.
ತರಬೇತಿಯು ಉಚಿತವಾಗಿರುತ್ತದೆ, ಹಾಗೆಯೇ ತರಬೇತಿಗೆ ಅಗತ್ಯವಾದ ಪಠ್ಯಗಳನ್ನೂ ಉಚಿತವಾಗಿ ಒದಗಿಸಲಾಗುವುದು. ಇದಲ್ಲದೆ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಿಕೊಡಲಾಗುವುದು. ಅಭ್ಯರ್ಥಿಗಳು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೇಲೆ ಅವರಿಗೆ ಪುಮಾಣ ಪತ್ರ ವಿತರಿಸುವುದರ ಜೊತೆಗೆ ಅವರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದರು.
ಆಸಕ್ತರು 9449864699, 9449864693, ಹಾಗೂ 080 – 68333999 ಕ್ಕೆ ಕರೆ ಮಾಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದರು.