ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಮೆಣಸಗೆರೆ ಗ್ರಾ.ಪಂ ಅಧ್ಯಕ್ಷರಾಗಿ ತಿಟ್ಟಮಾರನಹಳ್ಳಿ ಶಿಲ್ಪಶ್ರೀನಿವಾಸ್, ಉಪಾಧ್ಯಕ್ಷರಾಗಿ ಮಡೇನಹಳ್ಳಿ ಎಂ.ಎಸ್.ಸಿದ್ದಲಿಂಗಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2 ನೇ ಅವಧಿಗೆ ನಡೆದ ಚುನಾವಣೆಗೆ ತಿಟ್ಟಮಾರನಹಳ್ಳಿ ಶಿಲ್ಪಶ್ರೀನಿವಾಸ್, ಉಪಾಧ್ಯಕ್ಷರಾಗಿ ಎಂ.ಎಸ್.ಸಿದ್ದಲಿಂಗಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಕಾವೇರಿ ನೀರಾವರಿ ನಿಗಮದ ಎಇಇ ಪ್ರಶಾಂತ್, ಎಇ ಅವಿನಾಶ್ ಅವರು ಘೋಷಣೆ ಮಾಡಿದರು.
ನೂತನ ಅಧ್ಯಕ್ಷೆ ಶಿಲ್ಪಶ್ರೀನಿವಾಸ್ ಮಾತನಾಡಿ, ಪಂಚಾಯಿತಿಯಿಂದ ಬರುವ ಸೌಲಭ್ಯಗಳನ್ನು ಸಮಪರ್ಕವಾಗಿ ಒದಗಿಸಲು ಮುಂದಾಗುತ್ತೇನೆಂದು ತಿಳಿಸಿದರು.
ಉಪಾಧ್ಯಕ್ಷ ಎಂ.ಎಸ್.ಸಿದ್ದಲಿಂಗಸ್ವಾಮಿ ಅವರು ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳ ಉನ್ನತಿಗೋಸ್ಕರ ಶ್ರಮಿಸುತ್ತೇವೆಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಎನ್.ಸತೀಶ್, ಮುಖಂಡರಾದ ಎಂ.ಕೆ.ರಾಜಣ್ಣ, ಎಂ.ರಾಜಪ್ಪ, ಬೋರಯ್ಯ, ತಿಟ್ಟಮಾರನಹಳ್ಳಿ ದೊಡ್ಡತಮ್ಮಯ್ಯ, ಟಿ.ವಿ.ವೆಂಕಟೇಶ್, ಪೆಟ್ರೋಲ್ ಬಂಕ್ ಸ್ವಾಮಿ, ಕುಮಾರ್, ಸ್ವಾಮಿ ಶಿವಸ್ವಾಮಿ, ಟಿ.ಎನ್.ವೆಂಕಟೇಶ್, ಕೆ.ಟಿ.ಸುರೇಶ್, ಪಂಚಾಯಿತಿ ಸದಸ್ಯರಾದ ಎಂ.ಎಸ್.ಉಮೇಶ್, ಎಂ.ಕೆ.ಮಹದೇವು, ಎಂ.ರಾಜು, ಅಶ್ವಥ್, ಅಜಯ್, ಪುಪ್ಪಗಿರೀಶ್, ರುದ್ರಮ್ಮಶಿವಲಿಂಗಯ್ಯ, ಲಲಿತಾಂಭನಾಗರಾಜು, ಉಮಾದೇವಿಶಿವಲಿಂಗಯ್ಯ, ಶೋಭಾಒಡೆಯರ್, ಪಾರ್ವತಮ್ಮ, ಮುನಿರಾಜು ಉಪಸ್ಥಿತರಿದ್ದರು.