ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡಿದ್ದ ಯುವಕನ ಅಂಗಾಂಗಗಳನ್ನು ಪೋಷಕರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಕೊನ್ನಾಪುರದಲ್ಲಿ ನಡೆದಿದೆ.
ಆತ ಸಮೀಪದ ಪುರದೊಡ್ಡಿ ಗ್ರಾಮಕ್ಕೆ ಹೋಗಿ ವಾಪಸ್ ತನ್ನ ಗ್ರಾಮಕ್ಕೆ ಹಿಂದಿರುಗುವಾಗ ಹಲಗೂರು ಸಮೀಪದ ಟಿ.ಕೆ.ಹಳ್ಳಿಯ ಬಳಿ ಬುಲೆಟ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿತ್ತು. ಕೂಡಲೇ ಆತನನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ವೈದ್ಯರು ಪರೀಕ್ಷಿಸಿ ಆತನ ಮೆದಳು ನಿಷ್ಕ್ರಿಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.
ಅಲ್ಲಿಗೆ ತೆರಳಿದ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಅಭಿಷೇಕ್ ಅವರ ತಾಯಿ ಸರಸ್ವತಿ ಹಾಗೂ ಕುಟುಂಬಸ್ಥರು ಮೃತ ಅಬಿಷೇಕ್ ನ ಹೃದಯ ಹಾಗೂ ಕಿಡ್ನಿಯನ್ನು ಅಪೋಲೋ ಆಸ್ಪತ್ರೆಗೆ ದಾನ ಮಾಡಿದರು.
ಮೃತ ಅಭಿಷೇಕ ನ ಅಂತ್ಯಕ್ರಿಯೆ ಅವರ ಸ್ವಗ್ರಾಮ ಕೊನ್ನಾಪುರ ಗ್ರಾಮದಲ್ಲಿ ನೆರವೇರಿತು.