ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿತು ಕಬ್ಬಿನ ಲಾರಿ
ಚಾಲಕನ ನಿಯಂತ್ರಣ ತಪ್ಪಿದ ಕಬ್ಬಿನ ಲಾರಿಯೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕಬ್ಬೆಲ್ಲ ರಸ್ತೆಗೆ ಚೆಲ್ಲಾಡಿದ ಘಟನೆ ಇಂದು ನಡೆದಿದೆ.
ನಾಗಮಂಗಲ ಪಟ್ಟಣದ ಅಮ್ಮನಕಟ್ಟೆ ತಿರುವಿನ ಬಳಿ ಇಂದು ಸಂಜೆ ಕಬ್ಬನ್ನು ಹೊತ್ತು ಮಂಡ್ಯ ಮಾರ್ಗವಾಗಿ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿದೆ.
ಲಾರಿಯಲ್ಲಿದ್ದ ಕಬ್ಬು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ನಂತರ ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಲಾಯಿತು.
ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.