ಸರ್ವ ಸದಸ್ಯರ ಸಹಕಾರದಿಂದ ಕಸಬಾ ಸಂಘವು ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಧಮೇಂದ್ರ ಹೇಳಿದರು.
ಮಂಡ್ಯ ನಗರದಲ್ಲಿರುವ ಸಂತೆ ಮೈದಾನ ಸಮೀಪದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಿ.ಸಿ.ಸಿ. ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷರು, ನಿರ್ದೇಶಕರ ಆರ್ಥಿಕ ಸಹಕಾರ, ಅನುದಾನದಿಂದ ಕಸಬಾ ಸಂಘವು ಹಂತ ಹಂತವಾಗಿ ಅಭಿವೃದ್ದಿ ಕಾಣಲು ಮುಂದಾಗಿದೆ, ಹೊಸ ಯೋಜನೆಗಳನ್ನು ರೂಪಿಸಿ, ಷೇರುದಾರರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಮುಂದಾಗಿದೆ ಎಂದು ನುಡಿದರು.
ಸಂಘದ ಆವರಣವನ್ನು ಬಂದೋ ಬಸ್ತಿನಲ್ಲಿಡಲು ಕಾಂಪೌಂಡ್ ಅಗತ್ಯವಿದೆ, ಗೋಡೌನ್ಗಳ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಬೇಕಿದೆ, 10 ಲಕ್ಷ ರೂ.ಗಳ ಅಂದಾಜು ವೆಚ್ಚದ ಪಟ್ಟಿ ತಯಾರಿಸಲಾಗಿದೆ, ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಎಂ.ಮಂಗಳಾಗೌರಿ, ನಿರ್ದೇಶಕರಾದ ಕೆ.ಸಿ.ರವೀಂದ್ರ, ಜೆ.ಬೋರಯ್ಯ, ಬೋರೇಗೌಡ, ಎನ್.ನಾಗರಾಜು, ಪುಟ್ಟಸ್ವಾಮಿಗೌಡ, ಟಿ.ರಾಜು, ಡಿ.ಮೋಹನ್, ಬಿ.ಜೆ.ಶೋಭಾ, ಪುಟ್ಟಸ್ವಾಮಿ, ಬೊಮ್ಮೇಗೌಡ, ಸಿಇಓ ಚೇತನ್ ಮತ್ತು ಸಿಬ್ದಂದಿಗಳು, ಷೇರುದಾರರು, ಸದಸ್ಯರು ಹಾಜರಿದ್ದರು.