ಮಳವಳ್ಳಿ ಪಟ್ಟಣದ ಕಾಗೇಪುರ – ಬಸವನಪುರ ಬಳಿ ಬುಲೆರೋ ಗಾಡಿ ಪಲ್ಟಿ ಹೊಡೆದು 25ಕ್ಕಿಂತ ಹೆಚ್ಚು ಮಂದಿಗೆ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡಿರುವ ತಳಗವಾದಿ ಗ್ರಾಮದವರಾಗಿದ್ದು ಇವರೆಲ್ಲರೂ ಕುಂದೂರು ಬೆಟ್ಟದಲ್ಲಿ ನಡೆಯುತ್ತಿದ್ದ ಮದುವೆ ಒಂದಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ .
ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹಲವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿಕೊಡಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಮಾಜಿ ಶಾಸಕ ಡಾ. ಕೆ ಅನ್ನದಾನಿ
ಬಸವನಪುರ ಬಳಿ ಬೋಲೋರೋ ಗಾಡಿ ಪಲ್ಟಿ ಹೊಡೆದು 25 ಹೆಚ್ಚು ಮಂದಿ ಗಾಯಗೊಂಡವರನ್ನು ಮಾಜಿ ಶಾಸಕ ಡಾ. ಕೆ .ಅನ್ನದಾನಿ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಗೂಡ್ಸ್ ವಾಹನಗಳಲ್ಲಿ ಜನರು ಸಂಚಾರ ಮಾಡುತ್ತಿದ್ದು
ಹಲವು ದಿನಗಳ ಹಿಂದೆ ಬಸವನ ಬೆಟ್ಟದಲ್ಲಿ ತಮಡಳ್ಳಿ ಗ್ರಾಮದವರು 45ಕ್ಕೂ ಹೆಚ್ಚು ಜನರಿಗೆ ಗಾಯಗೊಂಡು ಒಬ್ಬ ಮೃತಪಟ್ಟಿದ್ದರು .ನೆನ್ನೆ ಅಂತರಳ್ಳಿ ಬೆಟ್ಟದ ಸಮೀಪ ನರೇಗಾ ಕೂಲಿ ಕಾರ್ಮಿಕರು ಹೋಗುತ್ತಿದ್ದ ಟೆಂಪೋ ಪಲ್ಟಿ ಹೊಡೆದು ಒಬ್ಬರು ಮಹಿಳೆ ಮೃತಪಟ್ಟಿದ್ದು 15 ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ .