Thursday, September 19, 2024

ಪ್ರಾಯೋಗಿಕ ಆವೃತ್ತಿ

ವಕೀಲ ಆರ್.ಜಗನ್ನಾಥ್ ಅವರಿಗೆ ಪಿತೃ ವಿಯೋಗ: ನೇತ್ರದಾನ ಮಾಡಿದ ಕುಟುಂಬಕ್ಕೆ ಡಾ.ಹೆಚ್.ಎಲ್ ನಾಗರಾಜು ಶ್ಲಾಘನೆ

ಪ್ರಗತಿಪರ ವಕೀಲ ಆರ್.ಜಗನ್ನಾಥ್ ಅವರ ತಂದೆ ರಾಮಸ್ವಾಮಿ (80) ಅವರು ಇಂದು ನಿಧನರಾಗಿದ್ದಾರೆ.

ಮಂಡ್ಯ ಎಪಿಎಂಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಮಸ್ವಾಮಿ ಅವರನ್ನು ನಿನ್ನೆಯಷ್ಟೆ ಮಂಡ್ಯ ನಗರ ಸ್ಯಾಂಜೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ವಯೋಸಹಜ ಸಾವನ್ನಪ್ಪಿದ್ದಾರೆ.

ಅವರ ಮೃತದೇಹ ಅಂತಿಮ ದರ್ಶನವನ್ನು ಮಂಡ್ಯ ನಗರದ ಹನಿಯoಬಾಡಿ ರಸ್ತೆಯ ಸದ್ವಿದ್ಯಾ ಶಾಲೆ ಬಳಿ ಸ್ವಗೃಹದಲ್ಲಿ ಇಡಲಾಗಿದೆ. ಇಂದು ಮಧ್ಯಾಹ್ನ ಮಂಡ್ಯ ನಗರದ ಷುಗರ್ ಟೌನ್ ಸಮೀಪದ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಇವರು ಪುತ್ರಿ ಪುಷ್ಪಲತಾ, ಪುತ್ರ ಆರ್.ಜಗನ್ನಾಥ್, ಸೊಸೆ ಕಮಲ, ಮೊಮ್ಮಕ್ಕಳಾದ ಪ್ರೀತಮ್ ಹಾಗೂ ಅಮೂಲ್ಯ ಅವರನ್ನು ಅಗಲಿದ್ದಾರೆ.

ನೇತ್ರದಾನದ ಮೂಲಕ ಸಾರ್ಥಕತೆ

ಮೃತ ರಾಮಸ್ವಾಮಿಯವರ ನೇತ್ರಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಅವರ ಇಚ್ಚೆಯಂತೆ ವಕೀಲ ಆರ್. ಜಗನ್ನಾಥ್ ಹಾಗೂ ಪತ್ನಿ ಕಮಲ ಅವರು ದಾನ ಮಾಡಿದರು. ಮಿಮ್ಸ್ ನ ವೈದ್ಯರಾದ ಡಾ.ಕಾನಿಷ್ಕ್ ಆದಾನ ಮತ್ತು ತಂಡದವರು ನೇತ್ರಗಳನ್ನು ಪಡೆದು ಸಂರಕ್ಷಿಸಿದರು.

ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಅವರು ನೇತ್ರದಾನ ಮಾಡಿದಕ್ಕಾಗಿ ದೃಢೀಕರಣ ಪತ್ರವನ್ನು ಕುಟುಂಬದವರಿಗೆ ವಿತರಣೆ ಮಾಡಿ, ಪ್ರಶಂಸೆ ವ್ಯಕ್ತಪಡಿಸಿದರು. ನೇತ್ರದಾನದ ಈ ಕಾರ್ಯವನ್ನು ನುಡಿಕರ್ನಾಟಕ.ಕಾಂ ಬಳಗವು ಶ್ಲಾಘಿಸಿದೆ.

ಪ್ರಗತಿಪರ ವಕೀಲ ಆರ್.ಜಗನ್ನಾಥ್ ಹಾಗೂ ಅವರ ಪತ್ನಿ ಕಮಲ ಈ ಹಿಂದಿನಿಂದಲ್ಲೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ರಾಮಸ್ವಾಮಿ ಅವರ ನೇತ್ರಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆಯನ್ನು ಪಡೆದು, ಸಮಾಜಕ್ಕೆ ಮಾದರಿಯಾಗಿದ್ದಾರೆ.

ಪ್ರಗತಿಪರ ವಕೀಲರಾದ ಬಿ.ಟಿ.ವಿಶ್ವನಾಥ್, ಶ್ರೀನಿವಾಸ್, ಮಹೇಶ್, ಚಂದನ್, ಪತ್ರಕರ್ತರಾದ ಎನ್.ನಾಗೇಶ್, ಸಂತೋಷ್, ಜಗದೀಶ್, ಕರ್ನಾಟಕ ಜನಶಕ್ತಿಯ ಪೂರ್ಣಿಮ, ಸಿದ್ದರಾಜು, ನೆಲದನಿ ಬಳಗದ ಲಂಕೇಶ್, ಸುಬ್ರಮಣ್ಯ ಮತ್ತಿತರರು ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು. ರಾಮಸ್ವಾಮಿ ಅವರ ನಿಧನಕ್ಕೆ ನುಡಿಕರ್ನಾಟಕ.ಕಾಂ ಬಳಗವು ಸಂತಾಪ ವ್ಯಕ್ತಪಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!