ಭಾರತೀಯ ಟ್ರಯಥ್ಲಾನ್ ಫೆಡರೇಷನ್ (Indian Triathlon Federation) ಗೋವಾದಲ್ಲಿ ಆಯೋಜಿಸಿರುವ 37 ನೇ ರಾಷ್ಟ್ರೀಯ ಟ್ರಯಥ್ಲಾನ್ ಕ್ರೀಡಾಕೂಟದಲ್ಲಿ ಮಂಡ್ಯ ತಾಲ್ಲೂಕಿನ ಚಿಕ್ಕಬಳ್ಳಿ ಗ್ರಾಮದ ಯುವ ಕ್ರೀಡಾ ಪ್ರತಿಭೆ ಭರತ್ ಸಿ.ಎಂ.ದ್ಯಾವಪ್ಪ ಭಾಗವಹಿಸಲಿದ್ದಾರೆ.
ಈ ಕ್ರೀಡಾಕೂಟವು ನ.3 ರಿಂದ 7 ರವರಗೆ ಗೋವಾದ ಕಾರಂಜಾಲೆಮ್, ಮಿರಾಮರ್ ಬೀಚ್ನಲ್ಲಿ ನಡೆಯಲಿದೆ, ನ.3ರಂದು ಕ್ರೀಡಾಪುಟುಗಳ ವೈಯಕ್ತಿಕ ಪರಿಚಯ ಕಾರ್ಯಕ್ರಮ ನಡೆಯಲಿದ್ದು, ನ.4ರಂದು ವೈಯಕ್ತಿಕ ಪುರುಷರ ಸ್ಪ್ರಿಂಟ್ ಡಿಸ್ಟನ್ಸ್ ಟ್ರಯಥ್ಲಾನ್ ನಡೆಯಲಿದೆ, ಟ್ರಯಥ್ಲಾನ್ ಪಂದ್ಯವು ಸ್ವಿಮ್ಮಿಂಗ್, ರನ್ನಿಂಗ್ ಹಾಗೂ ಸೈಕ್ಲಿಂಗ್ ಎಂಬ ಮೂರು ಕ್ರೀಡೆಗಳನ್ನು ಒಳಗೊಂಡಿರುತ್ತದೆ.
ನ.5ರಂದು ವೈಯಕ್ತಿಕ ಮಹಿಳಾ ಸ್ಪ್ರಿಂಟ್ ಡಿಸ್ಟನ್ಸ್ ಟ್ರಯಥ್ಲಾನ್ ನಡೆಯಲಿದ್ದು, ನ.6ರಂದು ಮಿಶ್ರ ತಂಡ ರಿಲೇಗಾಗಿ ಅಥ್ಲೀಟ್ ಬ್ರೀಫಿಂಗ್ ಮತ್ತು ಪರಿಚಯ ಕಾರ್ಯಕ್ರಮ ನಡೆಯಲಿದೆ ಹಾಗೂ ನ.7ರಂದು ಮಿಶ್ರ ತಂಡ ರಿಲೇ ಪಂದ್ಯಗಳು ನಡೆಯಲಿವೆ.
ಯುವ ಕ್ರೀಡಾ ಪ್ರತಿಭೆ ಭರತ್ ಅವರು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಹಾಗೂ ರುಕ್ಮಿಣಿ ದಂಪತಿಗಳ ಪುತ್ರರಾಗಿದ್ದು, ಪ್ರಸ್ತುತ ಬೆಂಗಳೂರಿನ ಅಲಾಮಿನ್ ಕಾಲೇಜಿನ ಬಿ.ಕಾಂ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.