Saturday, September 21, 2024

ಪ್ರಾಯೋಗಿಕ ಆವೃತ್ತಿ

ಸಂಕಷ್ಟದಲ್ಲಿ ಕಲಾವಿದ ಯೋಗೇಶ್: ಆರ್ಥಿಕ ಸಹಾಯಕ್ಕೆ ಮೊರೆ

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಲಾವಿದ ಹಾಗೂ ಹಾಡುಗಾರ ದೊದ್ದನಕಟ್ಟೆ ಯೋಗೇಶ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಅವರ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದು, ವಾರಕ್ಕೆ ಮೂರು ಬಾರಿ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ, ಇದರಿಂದಾಗಿ ಕಲಾವಿದನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದಾಗಿ ಇವರ ಪತ್ನಿ ದೀಪು, ಪುತ್ರಿ ಹಾಗೂ ಪುತ್ರ ಕಂಗಾಲಾಗಿದ್ದಾರೆ.

ಆರ್ಥಿಕ ಸಹಾಯಕ್ಕೆ ಮೊರೆ

ಕಲಾವಿದ ಯೋಗೇಶನನ್ನು ಉಳಿಸಿಕೊಳ್ಳಲು ಸ್ವತಃ ಪತ್ನಿಯೇ ತನ್ನ ಕಿಡ್ನಿಯನ್ನು ಪತಿಗೆ ನೀಡಲು ಮುಂದೆ ಬಂದಿದ್ದಾರೆ, ಆದರೆ ಇದರ ಶಸ್ತ್ರಚಿಕಿತ್ಸೆಗೆ ₹10 ರಿಂದ 15ಲಕ್ಷ ವೆಚ್ಚವಾಗಲಿದ್ದು, ದಾನಿಗಳ ಸಹಾಯಾಸ್ತಕ್ಕಾಗಿ ಎದುರು ನೋಡುತ್ತಿದ್ದಾರೆ.

ಆರ್ಥಿಕ ಸಹಾಯ ಮಾಡುವ ಮನಸುಳ್ಳವರು ದಯಮಾಡಿ ಯೋಗೇಶ್ ಅವರ ಕೆ.ಆರ್.ಪೇಟೆ ಕೆನರಾ ಬ್ಯಾಂಕ್  ಉಳಿತಾಯ ಖಾತೆ ಸಂಖ್ಯೆ 3335101005517, IFSC: CNRB0003335 ಇಲ್ಲಿಗೆ ಹಾಗೂ ಅವರ ಪತ್ನಿ ದೀಪು ಕೆ ಅವರ ಹೆಸರಿನಲ್ಲಿರುವ ಫೋನ್ ಪೇ ಹಾಗೂ ಗೂಗಲ್ ಪೇ ಸಂಖ್ಯೆ 9008239439 ಇಲ್ಲಿಗೆ ಹಣವನ್ನು ಕಳುಹಿಸಿ ಕೊಡುವಂತೆ ಮನವಿ ಮಾಡಲಾಗಿದೆ.

ನಾಡಿನ ಜನತೆ ಇಂತಹ ಕಲಾವಿದನ ಉಳಿವಿಗಾಗಿ ಉದಾರವಾಗಿ ಧನ ಸಹಾಯ ಮಾಡುವ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದ ಯೋಗೇಶ್ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಕೆ.ಆರ್.ಪೇಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!