ಹಾಲು ಉತ್ಪಾದನೆ ಜೊತೆಗೆ ಕುರಿ, ಮೇಕೆ, ಕೋಳಿ ಸಾಗಾಣಿಕೆಗೆ ಮಾಡಿದರೆ ರೈತರು ಹಾಗೂ ರೈತ ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸಬಹುದು ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ತಾಲೂಕಿನ ನೆಲ್ಲೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಹಸು ಸಾಕಿ, ಹಾಲು ಉತ್ಪಾದನೆ ಮಾಡುವುದರ ಜೊತೆಗೆ ಕುರಿ ಮೇಕೆ ಇನ್ನಿತರ ಪ್ರಾಣಿಗಳನ್ನು ಸಾಕುವುದರಿಂದ ಅವರ ಆರ್ಥಿಕತೆಯಲ್ಲಿ ಸ್ವಲ್ಪ ಸುಭದ್ರತೆ ಕಾಣಬಹುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ನೀಡಿರುವ ಗೃಹಲಕ್ಷ್ಮಿ ಯೋಜನೆಯ ಹಣವು ಕೆಲವು ಗೃಹಿಣಿಯರಿಗೆ ತಲುಪದೇ ಇದ್ದರೆ ಯಾರು ಆತಂಕ ಪಡುವ ಅಗತ್ಯವಿಲ್ಲ, ಒಟ್ಟಿಗೆ ನಿಮ್ಮ ಖಾತೆಗೆ ಜಮಾ ಆಗುತ್ತದೆ, ಸೂಕ್ತ ದಾಖಲೆಗಳನ್ನು ಒದಗಿಸಿ ಗೃಹಲಕ್ಷ್ಮಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಾ.ಉ.ಸ.ಸಂಘ ದ ಅಧ್ಯಕ್ಷ ಶೇಖರೇಗೌಡ, ಉಪಾಧ್ಯಕ್ಷ ಮಂಗಳ ಗೌರಿ, ಮನ್ಮುಲ್ ಮಧು ಶಂಕರ್, ಸಹಕಾರ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯ ನಾಗಪ್ಪ ಹಾಗೂ ಮುಖಂಡ ಮಹಾದೇವ ಸೇರಿದಂತೆ ಇದ್ದರು.