ಮಂಡ್ಯ ಜಿಲ್ಲಾ ಪ್ರಿಯಾಂಕ್ಖರ್ಗೆ ಅಭಿಮಾನಿಗಳ ಬಳಗ ಮತ್ತು ಶೋಷಿತ ಸಮುದಾಯಗಳ ಜಾಗೃತಿ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಹಾಗೂ ಐ.ಟಿ.ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ 45 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ “ಸಂವಿಧಾನ ಓದು” ಪುಸ್ತಕ ವಿತರಣಾ ಕಾರ್ಯಕ್ರಮವು ನ.22ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯನಗರದ ಪತ್ರಕರ್ತರ ಭವನದಲ್ಲಿ ನಡೆಯಲಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಹೆಚ್.ಎನ್.ರವೀಂದ್ರ ಸಮಾರಂಭ ಉದ್ಘಾಟಿಸುವರು. ಪ್ರಿಯಾಂಕ್ಖರ್ಗೆ ಅಭಿಮಾನಿಗಳ ಬಳಗದ ಅಧ್ಯಕ್ಷ ಸುಂಡಹಳ್ಳಿ ಮಂಜುನಾಥ್ ಪ್ರಾಸ್ತಾವಿಕ ನುಡಿ ನುಡಿಯುವರು. ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ನೋಟ್ ಬುಕ್ ವಿತರಣೆ ಮಾಡುವರು. ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರನ್ನು ಅಭಿನಂದಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಎಂಪಿಎಂಸಿ ಮಾಜಿ ಅಧ್ಯಕ್ಷ ಎಂ.ಡಿ.ಜಯರಾಂ, ಪತ್ರಕರ್ತ ಸೋಮಶೇಖರ್ ಕೆರಗೋಡು, ನಗರಸಭಾ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಕಾಂಗ್ರೆಸ್ ವಿವಿಧ ಘಟಕಗಳ ಜಿಲ್ಲಾಧ್ಯಕ್ಷರಾದ ಮುಜಾಹಿದ್ ಆಲಿ ಖಾನ್, ಸಾತನೂರು ಕೃಷ್ಣ, ಜಿ.ಪಂ.ಮಾಜಿ ಸದಸ್ಯರಾದ ಜಯರಾಜು, ಮಹದೇವಸ್ವಾಮಿ, ಪುರಸಭಾ ಸದಸ್ಯ ಪ್ರೇಮ್ ಕುಮಾರ್, ಮುಖಂಡರಾದ ಕುಮಾರ್, ಅಂಕರಾಜು, ರಮೇಶ್ ತಿಬ್ಬನಹಳ್ಳಿ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ದಲಿತ ಚಳವಳಿ ಹೋರಾಟಗಾರರಾದ ಪ್ರೊ.ಹೆಚ್.ಎಲ್ ಮಹಾದೇವ, ಪ್ರೊ.ಬಿ.ಎಸ್ ಚಂದ್ರಶೇಖರನ್, ಪತ್ರಕರ್ತರಾದ ಎಲ್. ಶಿವಶಂಕರ್ ತುಂಬಕೆರೆ, ಹನಿಯಂಬಾಡಿ ಜಗದೀಶ್, ಮಲ್ಲಿಕಾರ್ಜುನ ಎಂ.ಬಿ., ಆಟೋ ಚಾಲಕರಾದ ಕೃಷ್ಣ. ಟಿ, ಮಹಮದ್ ಖಾದೀರ್, ಟ್ಯಾಕ್ಸಿ ಚಾಲಕ ರಾಜು ಹಾಲಹಳ್ಳಿ, ರೈತ ಮಹಿಳೆಯರಾದ ನಂಜಮ್ಮ(ಸೂಲಗಿತ್ತಿ), ಹೊನ್ನಮ್ಮ, ವಿಜಯಕುಮಾರಿ, ದುಂಡಮ್ಮ, ರಾಣಿ ಆಲಿಯಾಸ್ ಚಿಕ್ಕೋಳಮ್ಮ, ಮಹದೇವಮ್ಮ, ರತ್ನಮ್ಮ, ವಸಂತ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದೀಪ್ತಿ. ಕೆ.ಸಿ. ಮಂಜುಳ. ಕೆ.ಎಸ್, ಸೋಬಾನಪದ ಹಾಡುಗಾರ್ತಿ ತಿಮ್ಮಮ್ಮ, ಕ್ರೀಡಾ ಕ್ಷೇತ್ರದ ಕು.ಸ್ಪಂದನಾ, ತ್ರಿಶಾಂಕ, ಸೈಕಲ್ ರಿಪೇರಿ ಮಾಡುವ ವೆಂಕಟೇಶ ಎನ್. ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಿಯಾಂಕ್ಖರ್ಗೆ ಅಭಿಮಾನಿಗಳ ಬಳಗದ ಅಧ್ಯಕ್ಷ ಸುಂಡಹಳ್ಳಿ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.