ಮುಂದಿನ ಐದು ತಿಂಗಳ ಒಳಗೆ ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ ಮುರಿದು ಬೀಳುತ್ತದೆ ಇದು ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೆಳತೂರು ಗ್ರಾಮದಲ್ಲಿ ಕಾರ್ಯಕ್ರಮವೊಂದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಪದ ಜೊತೆಗೆ ಗ್ಯಾರಂಟಿ ಯೋಚನೆಗಳು ಮರೀಚಿಕೆಯಾಗುತ್ತಿದೆ, ನಾನು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಸಾರಾಯಿ, ಲಾಟರಿ ನಿಲ್ಲಿಸಿ ಬಡ ಕುಟುಂಬ ಉದ್ದಾರಕ್ಕೆ ಶ್ರಮಿಸಿದ್ದೆ ಎಂದು ಹೇಳಿದರು.
ಒರಿಸ್ಸಾದಲ್ಲಿ ಕಾಂಗ್ರೆಸ್ ಎಂಪಿ ಮನೆಯಲ್ಲಿ 300 ಕೋಟಿ ಹಣ ಸೀಜ್ ಅಗಿದೆ, ಪ್ರತಿವರ್ಷ ಸಂಗ್ರಹವಾಗುವ 250 ಸಾವಿರ ಕೋಟಿಯಲ್ಲಿ 25 ಕೋಟಿ ಕಪ್ಪುಹಣ ಸಂಗ್ರಹವಾಗುತ್ತಿದೆ, ನಾಡಿನ ಜನತೆಗೆ ದ್ರೋಹ ಮಾಡುವುದಿಲ್ಲ, ನಾನು ಮುಖ್ಯಮಂತ್ರಿ ಹಾದಿಯಾಗಿ ಯಾರಿಗೂ ಹೆದರುವುದಿಲ್ಲ, ನಾನು ವಿಧಾನಸೌದಲ್ಲಿ ಟೇಬಲ್ ಕುಟ್ಟಿ ಮಾತನಾಡುತ್ತೆನೆ, ರೈತರು ಸಾಲಕ್ಕೆ ಹೆದರಿ ಅತ್ಮಹತ್ಯೆ ಮಾಡಿಕೊಳ್ಳಬೇಡಿ, ಒಳ್ಳೆಯ ದಿನಗಳು ಬರುತ್ತವೆ ಎಂದರು.
ನನಗೆ ನಿಮ್ಮ ಸೇವೆ ಮಾಡೋ ಸ್ವಲ್ಪ ಸೇವೆ ಮಾಡಲು ದೇವರು ಮರುಜನ್ಮ ನೀಡಿದ್ದಾನೆ, ಎಳನೀರಿಗೆ ಇರುವ ಬೆಲೆ ಕೊಬ್ಬರಿಗೆ ಇಲ್ಲ, ಸದನದಲ್ಲಿ ಸರ್ಕಾರವನ್ನು ರೈತರಿಗೆ ಕೊಬ್ವರಿಗೆ ಬೆಂಬಲ ಬೆಲೆ ನೀಡಿ ಎಂದು ಒತ್ತಾಯ ಮಾಡಿದ್ದೇನೆ, ನಪೆಡ್ ನವರು ಕೊಬ್ಬರಿ ಕೊಂಡು ಕೊಂಡು, ಮಾರಾಟ ಮಾಡುತ್ತಿದ್ದು ಕ್ವಿಂಟಾಲ್ ಗೆ 75000 ಬೆಲೆ ಇದೆ. ಕೇಂದ್ರ ಸರ್ಕಾರ 590 ಕೋಟಿ ಬೆಂಬಲ ಬೆಲೆ ನೀಡಿದರೂ ರಾಜ್ಯ ಸರ್ಕಾರದ ಬೆಂಬಲ ಬೆಲೆ 80 ಕೋಟಿ ನೀಡುತ್ತಿದೆ, ಭತ್ತದ ಬೆಲೆ ಕಡಿಮೆಯಾಗಿದ್ದು 05 ದೇಶಗಳಿಗೆ ಮಾರಾಟ ಮಾಡುತ್ತಿದ್ದು ಈ ವರ್ಷ ಬೆಳೆಯ ಕೊರತೆ ಯಾಗಿದ್ದು ಅಕ್ಕಿಯ ಬದಲು ಕಾಂಗ್ರೆಸ್ ಸರ್ಕಾರ 170 ರೂ ನೀಡುತ್ತಿದೆ ಎಂದರು.
ಶಾಸಕ ಹೆಚ್ ಟಿ ಮಂಜು ಮಾತನಾಡಿ, ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಕಾರ್ಯಕ್ರಮದಿಂದ ನಮ್ಮ ಪಕ್ಷ ಮುಗ್ಗರಿಸಿದೆ, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಬರುತ್ತೆ ನಮ್ಮ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್, ಮನ್ಮುಲ್ ನಿರ್ದೇಶಕ ಕೆ. ರವಿ (ಡಾಲು ರವಿ), ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು, ತಾಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಕೀಲ ವಿ ಎಸ್ ಧನಂಜಯ್ ಕುಮಾರ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಟಿ ಎ ಪಿ ಸಿ ಎಂ ಎಸ್ ನಿರ್ದೇಶಕ ಬಲದೇವ್, ಹೋಬಳಿ ಅಧ್ಯಕ್ಷ ಬಸವಲಿಂಗಪ್ಪ ಮತ್ತಿತರರಿದ್ದರು.