ಮಳವಳ್ಳಿ ತಾಲೂಕಿನ ಕಂದೇಗಾಲ ಹಾಗೂ ಕಲ್ಲುವೀರನಹಳ್ಳಿಯಲ್ಲಿ ನೆಲೆಗೊಂಡಿರುವ ಮತ್ತಿ
ತಾಳೇಶ್ವರ ದೇವಾಲಯದಲ್ಲಿ ಷಷ್ಠಿ ಪೂಜೆಯ ಸಂಭ್ರಮೋತ್ಸವದ ಆಚರಣೆ ಮಾಡಲಾಯಿತು.
ಸಹಸ್ತ್ರಾರು ಭಕ್ತರು ಮತ್ತಿತಾಳೇಶ್ವರ ದೇವಾಲಯಕ್ಕೆ ಬಂದು ಭಕ್ತಿ ಭಾವೈಕ್ಯತೆಯಿಂದ ಸರದಿ ಸಾಲಿನಲ್ಲಿ ನಿಂತು
ದೇವರ ದರ್ಶನ ಪಡೆದು ನಾಗರ ಕಲ್ಲಿಗೆ ಮಹಿಳೆಯರು ಹಾಲು ತುಪ್ಪ ಹಣ್ಣ ಹೂಗಳನ್ನು ಅರ್ಪಿಸಿದರು. ದೇವಸ್ಥಾನದ ಆವರಣದಲ್ಲಿ ಅಡುಗೆ ಮಾಡಿ ಪ್ರಸಾದವನ್ನು ಭಕ್ತರಿಗೆ ಪ್ರಸಾದವನ್ನು ವಿತರಣೆ ಮಾಡಲಾಯಿತು.
ಮತ್ತಿತಾಳೆಶ್ವರ ದೇವರ ಉತ್ಸವ ಮೂರ್ತಿ ರಥೋತ್ಸವ ಬಹಳ ಸಂಭ್ರಮದಿಂದ ಜರುಗಿತು, ಮತ್ತಿ ತಾಳೇಶ್ವರ
ಬಸಪ್ಪ ಹಾಗೂ ಹೊನ್ನಕ್ನಳ್ಳಿ ಶ್ರೀಮಂಟೇಸ್ವಾಮಿ ಬಸಪ್ಪಗಳಿಗೆ ಕೊಳದ ಬಳಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು.