ಮಂಡ್ಯದ ಗುತ್ತಿಗೆದಾರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತದ ನೂತನ ನಿರ್ದೇಶಕರಾಗಿ ಸಾಮಾನ್ಯ ವರ್ಗದಿಂದ ಕಾಂಗ್ರೆಸ್ ಮುಖಂಡ ಬಿ ಗೌಡಗೆರೆಯ ನವೀನ್ ಕುಮಾರ್ ಜಿ.ಬಿ ಆಯ್ಕೆಯಾಗಿದ್ದಾರೆ.
ಇಂದು ಸಭೆ ಸೇರಿದ್ದ ಆಡಳಿತ ಮಂಡಳಿಯು ಗುತ್ತಿಗೆದಾರರ ಸಾಮಾನ್ಯ ವರ್ಗದ ನಿರ್ದೇಶಕರ ಸ್ಥಾನಕ್ಕೆ ನವೀನ್ ಕುಮಾರ್ ಜಿ. ಬಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು.
ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಗುತ್ತಿಗೆದಾರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಟಿ. ಹನುಮಂತು ಅವರು, ಸಂಘದ ಸದಸ್ಯರ ಶ್ರೇಯೊಭಿವೃದ್ದಿಗೆ ದುಡಿಯುವಂತೆ ತಿಳಿಸಿದರು.