ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಎಂ ಕೋಡಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಹತ್ತು ಜನ ನಿರ್ದೇಶಕರು ಆಯ್ಕೆಯಾದರು. ಇಬ್ಬರುಅವಿರೋಧವಾಗಿ, ಎಂಟು ಜನ ಚುನಾವಣೆಯಲ್ಲಿ ಆಯ್ಕೆಯಾದವರು, ಇವರು ಮಾಜಿ ಶಾಸಕ ಸುರೇಶ್ ಗೌಡ ಅವರ ಬೆಂಬಲಿತರಾಗಿದ್ದಾರೆ.
ಚುನಾವಣೆಯಲ್ಲಿ ವಿಜೇತರಾದ ನಿರ್ದೇಶಕಿ ಹೇಮಾಲತಾ ಮಾತನಾಡಿ, ನಮ್ಮ ತಂಡದಿಂದ ಸ್ಪರ್ಧಿಸಿದ್ದ ಎಂಟು ಜನರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ, ಈ ಗೆಲುವಿಗೆ ಕಾರಣಕರ್ತರಾದ ಗ್ರಾಮದ ಮುಖಂಡರು ಹಾಗೂ ಸಂಘದ ಷೇರುದಾರರಿಗೆ ಕೃತಜ್ಞತೆಗಳು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಯೋಗೇಶ್ ಮಾತನಾಡಿ, ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸ್ಪರ್ಧಿಗಳು ಮತ್ತು ಜೆಡಿಎಸ್ ಮುಖಂಡರು ಮತ್ತು ಸಂಘದ ಷೇರುದಾರರಿಗೆ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದರು
ಜೆಡಿಎಸ್ ಮುಖಂಡರಾದ ದಿನೇಶ್, ಮೂರ್ತಿ, ಶೇಖರ್, ಮಿಥುನ್, ರೇವಣ್ಣ, ದೇವರಾಜು, ಜಯರಾಮ, ಯೋಗೇಶ್, ನಾರಾಯಣಸ್ವಾಮಿ ಭಾಗವಹಿಸಿದ್ದರು.